ಬೆಂಗಳೂರು : ಶಕ್ತಿ ಯೋಜನೆ ಜಾರಿಯಾಗಿ 2 ತಿಂಗಳು ತುಂಬುತ್ತಿದೆ. ಒಂದ್ಕಡೆ ಬಸ್ ಫುಲ್ ರಶ್ ಆಗಿ ಸಂಚಾರ ಮಾಡುತ್ತಿದ್ದರೆ, ಕೆಲ ಮಾರ್ಗಗಳಲ್ಲಿ ಬಸ್ ಸಂಚಾರವೇ ಇಲ್ಲದಂತಾಗಿದೆ. ಈ ಸಮಸ್ಯೆಯನ್ನ ಹೋಗಲಾಡಿಸಲು ಸಾರಿಗೆ ಇಲಾಖೆ ಈಗಾಗಲೇ 4 ಹೊಸ ಬಸ್ ಮಾರ್ಗಗಳಲ್ಲಿ ಈ ಸೇವೆಯನ್ನ ಆರಂಭಿಸಿದೆ.
ವಿದ್ಯಾರಣ್ಯಪುರ ಟು ಲಗ್ಗೆರೆ ಮಾರ್ಗ ಸಂಖ್ಯೆ MF 28ರಲ್ಲಿ ಮೂರು ಬಸ್ಗಳ ಸೇವೆಯನ್ನು ಆರಂಭಿಸಿದೆ. ರಾಮಚಂದ್ರಪುರ, ಬಿ.ಇ.ಎಲ್ ವೃತ್ತ, ಹೆಚ್.ಎಂ.ಟಿ ಆಡಿಟೋರಿಯಂ ಮತ್ತು ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಲಗ್ಗೆರೆ ತಲುಪಲಿದೆ. K.R ಮಾರ್ಕೆಟ್ ಟು ವಿದ್ಯಾರಣ್ಯಪುರಕ್ಕೆ 276- ಇ ಹೊಸ ಮಾರ್ಗದಲ್ಲಿ 5 ಬಸ್ಗಳ ಸೇವೆಯನ್ನ ಆರಂಭಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರಂ, ಮತ್ತಿಕೆರೆ ಮತ್ತು B.E.L ಸರ್ಕಲ್ ಮೂಲಕ ಬಸ್ಗಳು ಸಂಚರಿಸ್ತಿವೆ. ಯಶವಂತಪುರ ಟಿಟಿಎಂಸಿಯಿಂದ ನಾಯಂಡಹಳ್ಳಿ ಜಂಕ್ಷನ್ಗೆ 401 N.Y ಮಾರ್ಗ ಸಂಖ್ಯೆಯಲ್ಲಿ ಹೊಸದಾಗಿ 7 ಬಸ್ಗಳ ಸೇವೆಯನ್ನು ಆರಂಭಿಸಿದೆ. ಮಲ್ಲೇಶ್ವರಂ, ಮೋದಿ ಆಸ್ಪತ್ರೆ, ಹಾವನೂರು ಸರ್ಕಲ್, K.H.B ಕಾಲೋನಿ, ಸುಮನಹಳ್ಳಿ ಜಂಕ್ಷನ್, ನಾಗರಬಾವಿ ಸರ್ಕಲ್ ಮಾರ್ಗದಲ್ಲಿ ಬಸ್ ಸಂಚರಿಸ್ತಿವೆ.
ಇನ್ನು 500 ಕ್ಯೂ.ಎ ಮಾರ್ಗದಲ್ಲಿ ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ವರೆಗೆ 11 ಬಸ್ಗಳ ಸೇವೆ ಆರಂಭಿಸಿದೆ. ಹೆಬ್ಬಾಳ, ಟಿನ್ ಫ್ಯಾಕ್ಟರಿ ಮಾರ್ಗದಲ್ಲಿ ಈ ಬಸ್ಗಳು ಸಂಚರಿಸುತ್ತಿವೆ.