Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!State News

ಕಾಸ್ಟ್ಲಿದುನಿಯಾ ಕಣ್ರೀ, ತರಕಾರಿ ರೇಟ್ ಕೇಳಿದ್ರೆ ಸುಡುತ್ತೆ ಕೈ

ಬೆಂಗಳೂರು : ಇತ್ತೀಚೆಗೆ ಎಲ್ಲವೂ ಕಾಸ್ಟ್ಲಿ ಆಗಿದೆ. ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ. ಒಂದು ಕಡೆ ಉಚಿತ ವಿದ್ಯುತ್ ಜಾರಿಯ ಖುಷಿಯಲ್ಲಿದ್ರೆ, ಮತ್ತೊಂದೆಡೆ ಹಾಲು, ಹೋಟೆಲ್ ತಿಂಡಿ, ತರಕಾರಿ ದುಬಾರಿಯಾಗಿದೆ. ಅಡುಗೆ ಮಾಡೋದು ಬೇಡ, ತರಕಾರಿ ರೇಟ್ ಕೇಳುದ್ರೆ ಸುಡುತ್ತೆ ಕೈ ಎನ್ನುತ್ತಿದ್ದಾರೆ ಸಾರ್ವಜನಿಕರು.

ಟೊಮ್ಯಾಟೋ ಬೆಲೆ ಗಗನ ಕುಸುಮವಾಗಿದೆ. ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಎದುರಾಗಿದೆ. ತರಕಾರಿಗಳ ರೇಟ್ ಕೇಳಿ ಗ್ರಾಹಕರ ಜೇಬು ಸುಡುತ್ತಿದೆ. ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಹೇಗಿದೆ ತರಕಾರಿ ರೇಟ್?

-ಟೊಮ್ಯಾಟೊ-150 ರಿಂದ 160 ರೂಪಾಯಿ

-ಮೆಣಸಿನಕಾಯಿ – ಕಳೆದ ವಾರ 60 ರೂಪಾಯಿ ಈಗ 120 ರೂಪಾಯಿಗೆ ಏರಿಕೆ

-ಶುಂಠಿ – ಕಳೆದ ವಾರ 160 ಈಗ 300 ರೂಪಾಯಿಯಾಗಿದೆ

-ಬೆಳ್ಳುಳ್ಳಿ – ಒಂದು ತಿಂಗಳ ಹಿಂದೆ 80-100 ರೂಪಾಯಿ, ಇಂದು 200 ರೂಪಾಯಿ ತಲುಪಿರುವ ಬೆಳ್ಳುಳ್ಳಿ

-ಹುರುಳಿಕಾಯಿ – 80 – 100 ರೂಪಾಯಿ

-ಕ್ಯಾರೆಟ್- 60 ರೂಪಾಯಿ

-ಬೀಟ್ ರೋಟ್- 30 ರೂಪಾಯಿ

-ಮೂಲಂಗಿ – 20 ರೂಪಾಯಿ

-ಗುಂಡು‌ ಬದನೆಕಾಯಿ- 60 ರೂಪಾಯಿ

-ಕ್ಯಾಪ್ಸಿಕಂ- 60 ರೂಪಾಯಿ

-ಹೀರೇಕಾಯಿ – 80 ರೂಪಾಯಿ

-ಬೆಂಡೆ ಕಾಯಿ- 60 ರೂಪಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!