ಬೆಂಗಳೂರು : ಕಳೆದ ಎರಡುವರೆ ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ಗೆ ಶಾಸಕ ಸುರೇಶ್ ಕುಮಾರ್ ಪತ್ರವನ್ನು ಬರೆದಿದ್ದಾರೆ.
ಹೌದು ಕಳೆದ ಎರಡುವರೆ ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿಲ್ಲ ಇದರಿಂದ ಅತಿಥಿ ಉಪನ್ಯಾಸಕರು ರೋಸಿ ಹೋಗಿದ್ದಾರೆ .. ಎಷ್ಟುಬಾರಿ ಸರ್ಕಾರದ ಗಮನಕ್ಕೆ ತಂದು ಹೋರಾಟ ಮಾಡಿದರೂ ಕೂಡ ಸರ್ಕಾರ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗ ಅತಿಥಿ ಉಪನ್ಯಾಸಕರ ಪರ ಶಾಸಕ ಸುರೇಶ್ ಕುಮಾರ್ ನಿತ್ತಿದ್ದಾರೆ.. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಗೆ ಪತ್ರ ಕೂಡ ಬರೆದಿದ್ದಾರೆ.. ಇನ್ನು ಪತ್ರದಲ್ಲಿ ಏನಿದೆ ಅನ್ನೋದನ್ನ ನೋಡುವುದಾದರೆ… ಮೇ 16ರಿಂದ ಜುಲೈ ತಿಂಗಳವರೆಗೂ ಸಂಬಳ ದೊರೆತಿಲ್ಲ ಇದರಿಂದ ಅತಿಥಿ ಉಪನ್ಯಾಸಕರಾರಿಗೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ , ಹೀಗಾಗಿ ಕೂಡಲೇ ವೇತನ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೆನೆ ಎಂದು ತಿಳಿಸಿದ್ದಾರೆ.
ವರದಿ ; ವರ್ಷಿತ ತಾಕೇರಿ