ರಾಜ್ಯದ ವಿವಿಧ MID-PWD ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ಹಣ, ಚಿನ್ನ ನೋಡಿ ದಂಗಾದ ಅಧಿಕಾರಿಗಳು..!

ಬೆಂಗಳೂರು : ಮಾಗಡಿ ಪಿಡಬ್ಲ್ಯೂಡಿ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಕಲಬುರ್ಗಿ ಜಿಲ್ಲೆಯವರಾದ ಚನ್ನಬಸಪ್ಪ ಅವಟೆ ಅವರ ಮನೆ, ತೋಟದ ಮನೆ ಹಾಗೂ ನಾನಾ ಕಾಂಪ್ಲೆಕ್ಸ್ಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಲಾಗಿದೆ.
ಈ ವೇಳೆಯಲ್ಲಿ ಮನೆಯಲ್ಲಿನ ಕೆಲ ಸದಸ್ಯರೂ ಆರಂಭದಲ್ಲಿ ಸಹಕಾರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಎಲ್ಲವೂ ಸರಿ ಹೋಗಿದೆ. ಅಕ್ರಮ ಆಸ್ತಿ ಪತ್ತೆಗೆ ಸಹಕಾರ ದೊರೆಯುತ್ತಿದೆ ಎಂದು ಎಸಿಬಿ ಮೂಲಗಳು ಹೇಳಿವೆ. ಚನ್ನಬಸಪ್ಪ ಕಲಬುರಗಿ ನಗರದಲ್ಲಿ ಮನೆ, ಕಾಂಪ್ಲೆಕ್ಸ್, ಚಿಂಚೋಳಿ ತಾಲೂಕಿನ ಮಗದಮ್ಪುರದಲ್ಲಿ ತೋಟದ ಮನೆ ಹೊಂದಿದ್ದಾರೆ. ಅಲ್ಲದೆ, ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ 3 ಎಕರೆ ಕೃಷಿ ಭೂಮಿ ಇರುವ ದಾಖಲೆಗಳು ಪತ್ತೆಯಾಗಿವೆ.
ಬೆಂಗಳೂರಿಗೆ ವರ್ಗವಾಗುವ ಮುನ್ನ ಆಳಂದ ಜಿಲ್ಲಾ ಪಂಚಾಯಿತಿ ಜೆಇ ಆಗಿ ಕೆಲಸ ಮಾಡಿದ್ದರು. ಎರಡು ತಿಂಗಳ ಹಿಂದೆಯಷ್ಟೇ ವರ್ಗವಾಗಿತ್ತು ಎಂದು ಎಸಿಬಿ ಮೂಲಗಳು ಹೇಳಿವೆ. ಹೆಚ್ಚಿನ ಮಾಹಿತಿ ಕುಟುಂಬದ ಸದಸ್ಯರು ಹಾಗೂ ಅವರ ಹತ್ತಿರ ಸಂಬಂಧಿಕರ ವಿಚಾರಣೆಯ ಬಳಿಕ ಒಟ್ಟು ಆಸ್ತಿ ವೌಲ್ಯ ಗೊತ್ತಾಗಲಿದೆ ಎಂದು ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ್ ತಿಳಿಸಿದ್ದಾರೆ.

ಹುಬ್ಬಳ್ಳಿಯ ಐದು ಕಡೆ ಎಸಿಬಿ ದಾಳಿ : ಇತ್ತ ಹುಬ್ಬಳ್ಳಿಯ ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವರಾಜ ಕಲ್ಮೇಶ ಶಿಗ್ಗಾವಿ ಇವರು ಹುಬ್ಬಳ್ಳಿಯಿಂದ ವರ್ಗಾವಣೆಯಾಗಿದ್ದು, ಇನ್ನೂ ಇವರಿಗೆ ಹುದ್ದೆಯನ್ನು ತೋರಿಸಿಲ್ಲ. ಇವರ ಮನೆಯ ಮೇಲೆ ಧಾರವಾಡದ ಎಸಿಬಿ ಅಧಿಕಾರಿಗಳ ಮೂರು ತಂಡ ದಾಳಿ ನಡೆಸಿದೆ. ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ನೇತ್ರತ್ವದಲ್ಲಿ ದಾಳಿಯನ್ನು ಮಾಡಲಾಗಿದೆ.
ಹುಬ್ಬಳ್ಳಿಯ ಮೂರು ಕಡೆ ಮತ್ತು ಧಾರವಾಡದ ಎರಡು ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.
ಒಟ್ಟಾರೆ ಬೆಳ್ಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ಬೆಂಗಳೂರು, ಕಲಬುರ್ಗಿ, ಹುಬ್ಬಳ್ಳಿ ಧಾರವಾಡ ದಲ್ಲಿ ಐದು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.