ಬೆಂಗಳೂರು : ರಾಜ್ಯ ಸರ್ಕಾರ ಹಿಂದೂ ವಿರೋಧಿ ಆಡಳಿತ ನಡೆಸ್ತಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ (Former Minister Suresh Kumar) ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಮಭಕ್ತ ಕರಸೇವಕರ ಬಂಧನ ಖಂಡಿಸಿ, ಮಲ್ಲೇಶ್ವರಂನ ಪೊಲೀಸ್ ಠಾಣೆ ಮುಂದೆ ಮಾಜಿ ಸಚಿವ ಸುರೇಶ್ ಕುಮಾರ್ ಧರಣಿ ನಡೆಸುತ್ತಿದ್ದು ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೂರು ದಶಕದ ಹಿಂದಿನ ಪ್ರಕರಣದ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಮಾಡಲಾಗಿದೆ. ಇದರ ಹಿಂದಿನ ಉದ್ದೇಶ ಏನಿದೆ. 30 ವರ್ಷದಿಂದ ಅಲ್ಲೆ ಓಡಾಡುತ್ತಿದ್ದ ಆವಾಗ ಯಾಕೆ ಬಂಧಿಸಿಲ್ಲ. ಎರಡು ಬಾರಿ ಮುಚ್ಚಳಿಕೆ ಬರೆದುಕೊಟ್ಟಿದ್ದನು ಎಂದಿದ್ದಾರೆ.
ಇನ್ನು ಯತೀಂದ್ರ ಸಿದ್ದರಾಮಯ್ಯ ಹಿಂದೂ ರಾಷ್ಟ್ರ ಮಾಡಿದ್ರೆ ಆಫ್ಘಾನಿಸ್ತಾನವಾಗುತ್ತೆ ಎಂಬ ವಿಚಾರವಾಗಿ ಮಾತನಾಡಿ, ತಂದೆಯಂತೆ ಮಗ. ನೂಲಿನಂತೆ ಸೀರೆ ಅವ್ರ ಮಾತುಗಳು ಎಂದಿದ್ದಾರೆ.
ಕರ್ನಾಟಕದಲ್ಲಿ ಗೋದ್ರಾ ಹತ್ಯಾಕಾಂಡದಂತಹ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಹೇಳಿಕೆ ಖಂಡನೀಯ. ಜನವರಿ 22 ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗ್ತಿದೆ, ಅದನ್ನ ರಾಜ್ಯ ಕಾಂಗ್ರೆಸ್ ಸಹಿಸಿಕೊಳ್ಳಲಾಗದೆ, ಕರಸೇವಕರನ್ನ ಬಂಧಿಸಿ ರಾಜ್ಯ ಸರ್ಕಾರ ರಾಮಭಕ್ತರನ್ನ ಭೀತಿಗೊಳಪಡಿಸುವ ತಂತ್ರ ನಡೆಸ್ತಿದೆ ಎಂದು ಕಿಡಿಕಾರಿದ್ದಾರೆ.