ಬಾಗಲಕೋಟ. ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಪ್ರೇಮಾಂಕುರ ಬೆಳೆಸಿದ್ದಳು ಎಂದು ಅನುಮಾನಗೊಂಡು ಅವಳನ್ನು ಭಗ್ನ ಪ್ರೇಮಿಯೊಬ್ಬ ಕೊಲೆ ಮಾಡಿರುವ ಧಾರುಣ ಘಟನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ ಭಾಗವ್ವಗೋಳ(೨೨) ಕೊಲೆಯಾದ ಯುವತಿ, ಕಲಾದಗಿಯ ಹನಿಫ್ ಬೀಳಗಿ(೨೨) ಭಗ್ನ ಪ್ರೇಮಿ ಯುವತಿಯನ್ನು ಕೊಲೆಗೈದು ಪರಾರಿಯಾಗಿದ್ದ. ಬಾಗಲಕೋಟೆಯ ಆಸ್ಪತ್ರೆಯೊಂದರಲ್ಲಿ ಹನಿಫ್ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಜ್ಯೋತಿ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ್ ಮಾಡುತ್ತಿದ್ದಳು.
ಇಬ್ಬರ ನಡುವೆ ಎರಡು ವರ್ಷದ ಹಿಂದೆ ಸ್ನೇಹವಾಗಿ ನಂತರ ಅದು ಪ್ರೇಮಕ್ಕೆ ತಿರುಗಿತ್ತು. ಇತ್ತೀಚೆಗೆ ಜ್ಯೋತಿ ಇನ್ನೊಬ್ಬರ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ ಎಂದು ಅವಳ ಮೇಲೆ ಅನುಮಾನಗೊಳ್ಳುತ್ತಿದ್ದ ಹನಿಫ್. ಫೆ.೧೩ರಂದು ಜ್ಯೋತಿ ಯನ್ನು ಬೈಕ್ ಮೇಲೆ ಕರೆದುಕೊಂಡು ಕಲಾದಗಿ ಬಳಿಯ ಕಾತರಕಿ ಬ್ರಿಡ್ಜ್ ಬಳಿ ಕೊಲೆ ಮಾಡಿ ನೀರಿಗೆ ಎಸೆದಿದ್ದ ಎನ್ನಲಾಗಿದೆ.

ಹೀಗಾಗಿ ಜ್ಯೋತಿ ನಾಪತ್ತೆ ಆಗಿರುವ ಬಗ್ಗೆ ಆಕೆಯ ಪಾಲಕರು ಬಾಗಲಕೋಟೆ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ನಂತರ ಕಾತರಕಿ ಬ್ರಿಡ್ಜ್ ಬಳಿ ಶವ ಪತ್ತೆಯಾಗಿದ್ದು, ಪೊಲೀಸರು ಹನೀಫ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.