State News

ಕಳಪೆ ಮೆಣಸಿನಕಾಯಿ ಬೀಜದಿಂದ ರೈತರು ಕಂಗಾಲು..!

ಹಾವೇರಿ : ಒಂದು ಕಡೆ ಮುಂಗಾರು ಮಳೆ ಮುನಿಸು. ಇನ್ನೊಂದು ಕಡೆ ಕಷ್ಟಪಟ್ಟು ಬೆಳೆದ ಬೆಳೆ ಕಳಪೆ ಬೀಜದಿಂದ ಫಲಸು ಬಿಟ್ಟಿಲ್ಲ. ಇದರಿಂದ ರೈತನಿಗೆ ಶಾಕ್ ಮೇಲೆ ಶಾಕ್. ಸಾಲಸೂಲ ಮಾಡಿ ಮೆಣಸಿನಕಾಯಿ ಬೆಳೆ ಹಾಕಿದ ರೈತನಿಗೆ ಕಳಪೆ ಬೀಜದಿಂದ ಫಸಲು ಬಿಟ್ಟಿಲ್ಲ. ಕಳಪೆ ಬೀಜದಿಂದ ಹಾವೇರಿ ಅನ್ನದಾತರು ಕಂಗಾಲಾಗಿದ್ದಾರೆ.

ಹಾವೇರಿ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಅನ್ನದಾತರ ಕಥೆ ಇದಾಗಿದ್ದು, ಮುಂಗಾರು ಮಳೆ ಒಂದು ಕಡೆ ಇಲ್ಲದೆ ಕಂಗಾಲಾಗಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಕಳಪೆ ಬೀಜದಿಂದ ಕಂಗಾಲಾಗಿದ್ದಾರೆ. ಕಬ್ಬೂರು ಗ್ರಾಮದಲ್ಲಿ 20 ಕ್ಕೂ ಅಧಿಕ ರೈತರು 200 ಎಕರೆ ಗೂ ಅಧಿಕ ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದಾರೆ. ಅದರೆ ಮೆಣಸಿನಕಾಯಿ ಗಿಡಗಳು ಉತ್ತಮವಾಗಿ ಬೆಳೆದು ನಿಂತಿವೆ. ಅದರೆ ಯಾವ ಗಿಡದಲ್ಲಿ ಹೂವು ಬಿಟ್ಟಿಲ್ಲ , ಮೆಣಸಿನಕಾಯಿ ಕಾಯಿ ಸಹ ಇಲ್ಲ . ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ.

ಒಂದು ಎಕರೆ, ಎರಡು ಎಕರೆ ಹೀಗೆ ಮೂರು ಎಕರೆ ವರೆಗೂ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆಯನ್ನ ಹಾಕಿದ್ದಾರೆ.ಮೆಣಸಿನಕಾಯಿ ಫಸಲು ಬಿಟ್ಟಿಲ್ಲ. ನಕಲಿ ಬೀಜವನ್ನ ನೀಡಿದ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾರಿ ಮುಂಗಾರು ಮಳೆ ಸಹ ಕೈಕೊಟ್ಟಿದೆ. ಕಳೆದ ಎರಡು ಮೂರು ತಿಂಗಳಿನಿಂದ ರೈತರು ಮೆಣಸಿನಕಾಯಿ ಬೀಜ, ಸಸಿ ಹಾಗೂ ರಸಗೊಬ್ಬರಕ್ಕಾಗಿ ಪ್ರತಿ ಎಕರೆಗೆ60 ಸಾವಿರ ರುಪಾಯಿ ಖರ್ಚು ಮಾಡಿದ್ದಾರೆ. ಅದರೆ ಈಗ ಪ್ರತಿಕ್ವಿಂಟಾಲ್ ಮೆಣಸಿನಕಾಯಿ ಐದು ಸಾವಿರ, ಆರು ಸಾವಿರ ಇದೆ. ಅದರೆ ಕಳಪೆ ಬೀಜದಿಂದ ಮೆಣಸಿನಕಾಯಿ ಗಿಡಗಳು ಮಾತ್ರ ಬೆಳೆದಿದ್ದು, ಫಸಲು ಬಿಡುತ್ತಿಲ್ಲ‌.ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಮೆಣಸಿನಕಾಯಿ ಇಳುವರಿಯೇ ಬಂದಿಲ್ಲ.ಯಾವುದೇ ಕೃಷಿ ಅಧಿಕಾರಿ ಹಾಗೂ ಕಳಪೆ ಬೀಜ ನೀಡಿದ ಕಂಪನಿಯ ಜಮೀನಿಗೆ ಇವತ್ತು ಬರುತ್ತೆನೆ, ನಾಳೆ ಬರುತ್ತೇನೆ ಹರಕೆ ಉತ್ತರ ಹೇಳುತ್ತಾ ಕುಳಿತ್ತಿದ್ದಾರೆ. ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿರಾರು ರುಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದ ರೈತರಿಗೆ ಕಳಪೆ ಬೀಜದಿಂದ ಕಂಗಾಲಾಗಿದ್ದಾರೆ. ಇನ್ನಾದರೂ ಸರ್ಕಾರ ಕಳಪೆ ಬೀಜದಿಂದ ವಿರುದ್ಧ ಕಠಿಣ ಕ್ರಮ ಕೈಗೊಂಡು, ನೊಂದ ರೈತರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕಿದೆ.

ವರದಿ : ಕಿರಣ್ ಬಳ್ಳಾರಿಮಠ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!