ಹೈನು ವಿಜ್ಞಾನ ಪದವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಹೈನು ವಿಸ್ತರಣಾಧಿಕಾರಿ ಹುದ್ದೆ ಸೃಷ್ಟಿಗೆ ವಿದ್ಯಾರ್ಥಿಗಳ ಆಗ್ರಹ
ಹೈನು ವಿಸ್ತರಣಾಧಿಕಾರಿ ಹುದ್ದೆ ಸೃಷ್ಠಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬೆಂಗಳೂರಿನ ಹೈನು ವಿಜಾÐನ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ರು. ಹೈನು ಮಹಾ ವಿದ್ಯಾಲಯದ ಎದುರು ಜಮಾಯಿಸಿದ ವಿದ್ಯಾರ್ಥಿಗಳು, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು.
ಈ ವಿಶ್ವವಿದ್ಯಾಲಯ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕಾ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾಗಿದೆ. ಇಲ್ಲಿ ಪಾಸ್ ಆದ ಪದವೀಧದಾರರಿಗೆ ಸರ್ಕಾರ ಮಾನ್ಯತೆ ಪಡೆದ ವಿಭಾಗಗಳಲ್ಲಿ ಯಾವುದೇ ಉದ್ಯೋಗ ಸಿಕ್ಕಿಲ್ಲ. ಕಳೆಸ ಆರು ತಿಂಗಳಿನಿಂದ ಪ್ರತಿ ತಾಲೂಕಿನಲ್ಲೂ ಹೈನು ವಿಸ್ತರಣಾ ಅಧಿಕಾರಿಯನ್ನ ನೇಮಿಸುವಂತೆ ಸರ್ಕಾರಕ್ಕೆ ವಿದ್ಯಾರ್ಥಿಗಳು ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತಮ್ಮಲ್ಲಿ ಹಣವಿಲ್ಲವೆಂದು ಸರ್ಕಾರ ಸಬೂಬು ನೀಡುತ್ತಿದೆ ಎಂದು ವಿದ್ಯಾರ್ಥಿಗಳು ಬೇಸರ ಹೊರಹಾಕಿದ್ದಾರೆ.