ಕಾಲೇಜು ಮುಗಿಸಿ ಮನೆಗಳಿಗೆ ಹೊರಟಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಪುಂಡನೊಬ್ಬ ಮೂರ್ಚೆ ಬರುವ ಸ್ಪ್ರೇ ಸಿಂಪಡಿಸಿ ಕಿರುಕುಳು ನೀಡುತ್ತಿದ್ದ ಘಟನೆ ಚಿಕ್ಕಬಳ್ಳಾಪುರ ( chikkaballapura) ಜಿಲ್ಲೆಯ ಚಿಂತಾಮಣಿ ನಗರದ ಮಾರುತಿ ಸರ್ಕಲ್ ನಲ್ಲಿ ನಡೆದಿದೆ.
ಕೋಲಾರ ( kolara) ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೈಯಪ್ಪನಹಳ್ಳಿ ಗ್ರಾಮದ ನಿವಾಸಿ ಶಿವು ಎಂಬ ವ್ಯಕ್ತಿ ಆರೆಂಜ್ ಜ್ಯೂಸ್ ಬಾಟಲಿನಲ್ಲಿ ಕೆಮಿಕಲ್ ಮಿಶ್ರಣವನ್ನು ತುಂಬಿಸಿ ಕಾಲೇಜು ಯುವತಿಯರ ಮೇಲೆ ಸಿಂಪಡಿಸಲು ಪ್ರಯತ್ನಿಸುತ್ತಿದ್ದ. ಇದನ್ನು ಓದಿ : – PSI ನೇಮಕಾತಿ ಅಕ್ರಮ – ಅಮೃತ್ ಪೌಲ್ ಗೆ 14 ದಿನ ನ್ಯಾಯಾಂಗ ಬಂಧನ
ಈತನ ವರ್ತನೆಗೆ ಭಯಭೀತರಾದ ವಿದ್ಯಾರ್ಥಿನಿಯರು ಕಿರುಚಿಕೊಂಡಿದ್ರು , ತಕ್ಷಣ ಎಚ್ಚೆತ್ತ ಸಾರ್ವಜನಿಕರು ಧಾವಿಸಿ ಪುಂಡನಿಗೆ ಹಿಗ್ಗಾ ಮುಗ್ಗಾ ಥಳಿಸಿ ಚಿಂತಾಮಣಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನು ಓದಿ : – ಸಂತೋಷ್ ಪಾಟೀಲ್ ಪ್ರಕರಣವನ್ನ ಸರ್ಕಾರ ಮುಚ್ಚಿ ಹಾಕಲು ಯತ್ನ – ಡಿ.ಕೆ ಸುರೇಶ್