ರಾಮನಗರ : ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ಹಿನ್ನೆಲೆ ರಾಮನಗರ(Ramanagara)ದಲ್ಲಿ ವಿವಿಧ ಸಂಘಟನೆಗಳು ಸ್ವಯಂಚಾಲಿತವಾಗಿ ಬಂದ್ ಕರೆ ನೀಡಿದ್ದಾರೆ
ರಾಮನಗರ ಟೌನ್ ಭಾಗದಲ್ಲಿ ಎಲ್ಲಾ ಅಂಗಡಿಮುಗ್ಗಟ್ಟುಗಳು ಬಂದ್ ಮಾಡಿ ವರ್ತಕರು, ವ್ಯಾಪಾರಿಗಳು, ದಲ್ಲಾಳಿಗಳು, ರೈತರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದಾ ಜನಜಂಗುಳಿಯಿಂದ ತುಂಬಿದ್ದ ಎಪಿಎಂಸಿ ಮಾರುಕಟ್ಟೆ ಖಾಲಿ.. ಖಾಲಿ ಹೊಡೆಯುವಂತಾಗಿದೆ.
ಇನ್ನೂ ಮಾರುಕಟ್ಟೆ ಗೇಟ್ ಬಳಿ ಪ್ಲೆಕ್ಸ್ ಹಾಕಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಇಂದು ರಾಮನಗರ ಬಂದ್ನಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳ ತೆರಳೋದಕ್ಕೆ ಪರದಾಡಿದ್ದಾರೆ. ಅಲ್ಲದೇ ರಾಮನಗರ ಐಜೂರು ವೃತ್ತದಲ್ಲಿ ರಸ್ತೆ ತಡೆ ಉಗ್ರ ಪ್ರತಿಭಟನೆ ನಡೆಸಿದ್ದಾರೆ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಂಸದ ಡಿ.ಕೆ. ಸುರೇಶ್ ವಿರುದ್ಧ ಗೂಂಡಾ ರಾಜಕಾರಣಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿ ಮುಂಗಟ್ಟು ತೆರೆಯದಂತೆ ಹೋರಾಟಗಾರರ ಮನವಿಯೂ ಮಾಡಿದ್ದಾರೆ, ಪ್ರತಿಭಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ, ಪ್ರತಿಭಟನಾಕಾರರಿಂದ ಮಾಹಿತಿ ಪಡೆದುಕೊಂಡಿದ್ದಾರೆ.