ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಬೊಮ್ಮಾಯಿ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಢಳಿತಕ್ಕೆ ಬರಲಿದೆ . ಉಸ್ತುವಾರಿ ಸಚಿವರ ಬದಲಾವಣೆ ಹೈಕಮ್ಯಾಂಡ್ ಗೆ ಬಿಟ್ಟಿದ್ದು . ನನಗೆ ಯಾವ ಖಾತೆ ಕೊಟ್ರು ನಿಭಾಯಿಸಲು ಸಿದ್ದನಿದ್ದೇನೆ. ಇದನ್ನೂಓದಿ :- ಡಿ.ಕೆ.ಶಿವಕುಮಾರ್ ಏನೇ ಮಾಡಿದ್ರೂ ಅಂಜುವ ಮಗ ನಾನಲ್ಲ – ಬಸನಗೌಡ ಪಾಟೀಲ್ ಯತ್ನಾಳ್
ಮುಂದಿನ ದಿನಗಳಲ್ಲಿ ನಮ್ಮ ನಮ್ಮ ಜಿಲ್ಲೆಯಲ್ಲೆ ಉಸ್ತುವಾರಿ ನೀಡಲು ಮನವಿ ಮಾಡಿದ್ದೇವೆ. ಚುನಾವಣೆ ವರ್ಷ ಇರುವ ಕಾರಣ ತವರು ಜಿಲ್ಲೆಯನ್ನೆ ಉಸ್ತುವಾರಿ ನೀಡಲು ಮನವಿ ಮಾಡಿದ್ದೇವೆ. ನನಗೆ ಯಾವುದೆ ಖಾತೆ ಕೊಟ್ಟರು ನಿಭಾಯಿಸುತ್ತೇನೆ ಎಂದು ತಿಳಿಸಿದ್ರು.
ಇದನ್ನೂಓದಿ :- ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಿ.ಟಿ ರವಿ