ಬೆಳಗಾವಿ ವಿಧಾನಸಭೆ ಅಧಿವೇಶನ ನಾಳೆಗೆ ಮುಕ್ತಾಯ – ಹೆಚ್ಚುವರಿ ಮೂರು ಗಂಟೆ ಸದನ ನಡೆಸುವಂತೆ ಸಿದ್ದರಾಮಯ್ಯ ಸಲಹೆ

ಬೆಳಗಾವಿ ವಿಧಾನಸಭೆ ಅಧಿವೇಶನ ಒಂದು ದಿನ ಮೊದಲು ಅಂದ್ರೆ ನಾಳೆಗೆ ಮುಕ್ತಾಯವಾಗಲಿದೆ. ಸದನವನ್ನ ನಾಳೆ ಸಂಜೆ ಮುಗಿಸುತ್ತಿದ್ದೇವೆ. ಒಂದು ದಿನ ಮೊದಲೇ ಸದನ ಮುಗಿಸುತ್ತಿದ್ದು ಇದು ಮೂರು ಪಕ್ಷಗಳ ಸದಸ್ಯರು ಸೇರಿ ತೆಗೆದುಕೊಂಡಿರುವ ನಿರ್ಧಾರ.

ಬೆಳಗಾವಿ ವಿಧಾನಸಭೆ ಅಧಿವೇಶನ (Belagavi assembly session) ಒಂದು ದಿನ ಮೊದಲು ಅಂದ್ರೆ ನಾಳೆಗೆ ಮುಕ್ತಾಯವಾಗಲಿದೆ. ಸದನವನ್ನ ನಾಳೆ ಸಂಜೆ ಮುಗಿಸುತ್ತಿದ್ದೇವೆ. ಒಂದು ದಿನ ಮೊದಲೇ ಸದನ ಮುಗಿಸುತ್ತಿದ್ದು ಇದು ಮೂರು ಪಕ್ಷಗಳ ಸದಸ್ಯರು ಸೇರಿ ತೆಗೆದುಕೊಂಡಿರುವ ನಿರ್ಧಾರ. ಹೀಗಾಗಿ ಇಂದು ಆರು ಗಂಟೆವರೆಗೂ ಸದನ ನಡೆಸೋಣ.

ನಾಳೆ ಮೊದಲು ಹೆಚ್ಚುವರಿ ಬಜೆಟ್ ಪಾಸ್ ಮಾಡೋಣ. ಬಳಿಕ ನಿಯಮ 69 ಅಡಿಯಲ್ಲಿ ಚರ್ಚೆ ಮಾಡೋಣ ಎಂದು ಸ್ಪೀಕರ್ ಹೇಳಿದ್ರು. ಈ ವೇಳೆ ಸದನ ಒಂದು ದಿನ ಮೊದಲು ಮುಗಿಸುವುದಕ್ಕೆ ಪ್ರಿಯಾಂಕ್ ಖರ್ಗೆ (Priyank kharge) ಆಕ್ಷೇಪ ವ್ಯಕ್ತಪಡಿಸಿದ್ರು. ಉತ್ತರ ಕರ್ನಾಟಕ (Uttar karnataka) ಭಾಗದ ಸಮಸ್ಯೆಗಳು ಚರ್ಚೆ ಆಗಿಲ್ಲ. ಒಂದು ದಿನ ಮೊದಲು ನೀವು ಮುಗಿಸಿದ್ರೆ ನಮಗೆ ಅವಕಾಶ ಸಿಗಲ್ಲ ಎಂದ ಪ್ರಿಯಾಂಕ್ ಖರ್ಗೆ ಹೇಳಿದ್ರು. ನೀವು ನಾಳೆಯೇ ಮುಗಿಸುವುದಾದ್ರೆ ನಾಡಿದ್ದು ನಡೆಸಬೇಕಿದ್ದ ಮೂರು ಗಂಟೆಯನ್ನ ನಾಳೆಯೇ ಹೆಚ್ಚುವರಿಯಾಗಿ ನಡೆಸಬೇಕು ಎಂದು ಸಿದ್ದರಾಮಯ್ಯ (Siddaramaiah) ಸಲಹೆ ನೀಡಿದ್ರು. ರಾತ್ರಿ 8 ರಿಂದ 9 ಗಂಟೆವರೆಗೂ ಸದನ ನಡೆಸಿ. ಇಲ್ಲ ಅಂದ್ರೆ ಈ ಭಾಗದಲ್ಲಿ ತಪ್ಪು ಸಂದೇಶ ಹೋಗುತ್ತೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ರು. ಈ ವೇಳೆ ಸಿದ್ದರಾಮಯ್ಯ ಸಲಹೆ ಸ್ವಾಗತಾರ್ಹ ಎಂದು ಸ್ಪೀಕರ್ ಹೇಳಿದ್ರು.

ಇದನ್ನು ಓದಿ : – ಹಳ್ಳಿಗೆ ಸುಮ್ಮನೆ ಹೋಗಿ ಮಲಗಿ ಬರೋದಾ? ಆರ್.ಅಶೋಕ್ ಗೆ ಸಿದ್ದರಾಮಯ್ಯ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!