ವಿಜಯನಗರ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟದಲ್ಲಿ KME ದಾಖಲುಗಳಿಲ್ಲದ ಅನಧಿಕೃತವಾಗಿ ವೈದ್ಯ ವೃತ್ತಿ ಮಾಡುತ್ತಿರುವ ಕ್ಲಿನಿಕ್ ಗಳನ್ನು ಆರೋಗ್ಯಾಧಿಕಾರಿಗಳು ಪರಿಶೀಲಿಸಿ, ಆ ಕ್ಲಿನಿಕ್ಗಳಿಗೆ ಬೀಗ ಹಾಕಿ ಬಂದ್ ಮಾಡಿದ್ದಾರೆ.
ಪಟ್ಟಣದ ಹಳೇ ಸಾರ್ವಜನಿಕ ಆಸ್ಪತ್ರೆಯ ಹತ್ತಿರದ ಕ್ಲಿನಿಕ್, ಬೆಂಗಳೂರು ರಸ್ತೆಯಲ್ಲಿನ ಕ್ಲಿನಿಕ್, ಶ್ರೀ ಪೇಟೆ ಬಸವೇಶ್ವರ ನಗರದ ಕುಂಬಾರ ಓಣಿಯಲ್ಲಿನ ನಾಟಿ ವೈದ್ಯೆನ ಮನೆಯಲ್ಲಿನ ಕ್ಲಿನಿಕ್ ಗಳನ್ನು ಆರೋಗ್ಯಾಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ತಾಲೂಕು ವೈದ್ಯಾಧಿಕಾರಿ ಎಸ್ಪಿ ಪ್ರದೀಪ್ ಕುಮಾರ ನೇತೃತ್ವದಲ್ಲಿ ನ ಆರೋಗ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿ, KME ಪ್ರಮಾಣ ಪತ್ರವಿಲ್ಲದೆ, ಅನಧೀಕೃತವಾಗಿ ವೈದ್ಯಕೀಯ ವೃತ್ತಿ ಮಾಡುವವರ ಕ್ಲಿನಿಕ್ ಗಳನ್ನು ಬಂದ್ ಮಾಡಿ ಕ್ರಮ ಜರುಗಿಸಲಾಗಿದೆ.
ತಪಾಸಣೆ ವೇಳೆ ತಾಲೂಕು ಹಿರಿಯ ವೈದ್ಯಕೀಯ ನಿರೀಕ್ಷಣಾಧಿಕಾರಿ ಜಗದೀಶನಾಯ್ಕ ನೆಣಾವತ್, ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ, ಆರೋಗ್ಯ ಇಲಾಖೆಯ ಸಿಬ್ಬಂದಿ ವೆಂಕಟೇಶ, ಎಎಸೈ ಜಗದೀಶ ತಂಡದಿಂದ ಕಾರ್ಯಚರಣೆ ನಡೆಸಲಾಗಿತ್ತು.
ವರದಿ: ವಿ.ಜಿ.ವೃಷಭೇಂದ್ರ, ವಿಜಯನಗರ