ಮಂಡ್ಯ : ಕರ್ನಾಟಕ ತಮಿಳುನಾಡು ಕಾವೇರಿ ವಿವಾದ ದಿನದಿಂದ ದಿನಕ್ಕೆ ಬೇರೆ ರೂಪ ತಾಳುತ್ತಿದೆ.
ಇದೀಗ ಆರನೇ ದಿನವೂ ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಮಂಡ್ಯದಲ್ಲಿ ದಿನೇ ದಿನೇ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾಗಿದೆ.
ಇಂದು ಕೂಡ ಮಂಡ್ಯದಲ್ಲಿ ಹಲವು ಕಡೆ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದ್ದು, ಮಂಡ್ಯ ರಕ್ಷಣಾ ವೇದಿಕೆಯಿಂದ ಇಂದು ಬಿಸ್ಲೆರಿ ವಾಟರ್ನಲ್ಲಿ ನಾಟಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲಾ ರೈತರಿಗೆ ಭತ್ತ ನಾಟಿಗೆ ಕಾವೇರಿ ನೀರಿಲ್ಲ ಎಂದು ವಿನೂತನ ಪ್ರತಿಭಟನೆ ನಡೆಸಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಬಿಸ್ಲೆರಿ ವಾಟರ್ ಭತ್ತದ ನಾಟಿ ನಡೆಯಲಿದ್ದು, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಕಾವೇರಿ ಪ್ರತಿಮೆ ಹಾಲಿನ ಅಭಿಷೇಕ ನಡೆಯಲಿದೆ. ಸುಪ್ರೀಂ ತೀರ್ಪು ಕನ್ನಡಿಗರ ಪರ ಬರಲೆಂದು ಪ್ರಾರ್ಥಿಸಿ ಅಭಿಷೇಕ, ಪೂಜೆ ನಡೆಯಲಿದೆ.
ಮಂಡ್ಯದ ಡಿಸಿ ಕಚೇರಿ ಸಮೀಪದ ಕಾವೇರಿ ಪ್ರತಿಮೆಗೆ ಹಾಲಿನ ಅಭಿಷೇಕ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಗೆ ಅಭಿಷೇಕ ನಡೆಯಲಿದೆ.
ಶ್ರೀರಂಗಪಟ್ಟಣದ ಭೂಮಿತಾಯಿ ಹೋರಾಟ ಸಮಿತಿಯಿಂದ ನಾಮ ಚಳುವಳಿ ನಡೆಯಲಿದ್ದು, ಹಣೆ ಮೇಲೆ ಮೂರು ನಾಮ ಹಾಕಿ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ.
ಮಂಡ್ಯ ಜನರಿಗೆ ರಾಜ್ಯ ಸರ್ಕಾರ, ಕಾವೇರಿ ಪ್ರಾಧಿಕಾರ ನಾಮ ಹಾಕ್ತಿದೆ ಎಂದು ಅಣಕಿಸಲು ವಿಭಿನ್ನ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ವಿನೂತನ ಪ್ರತಿಭಟನೆ ನಡೆಯಲಿದೆ. ಕೆ.ಆರ್.ಎಸ್ ಮುತ್ತಿಗೆಗೆ ರಾಜ್ಯ ರೈತ ಸಂಘ ರೈತ ಬಣದಿಂದ ಪ್ಲಾನ್ ಮಾಡಲಾಗಿದ್ದು, ಅತ್ತ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ 6 ನೇ ದಿನವು ಅಹೋರಾತ್ರಿ ಧರಣಿ ಮುಂದುವರಿದಿದೆ.
ಕೆ.ಆರ್.ಎಸ್ ಅಣೆಕಟ್ಟೆ ಬಳ ನಡೆಯುತ್ತಿರುವ ಹೋರಾಟವು, ಕಾವೇರಿಗಾಗಿ ನಿರಂತರ ಹೋರಾಟ ನಡೆದ್ರು ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಸರ್ಕಾರದ ಜೊತೆ ಮಂಡ್ಯ ಜಿಲ್ಲಾ ಶಾಸಕರು, ಸಂಸದರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ರೈತರ ಪರ ಧ್ವನಿ ಎತ್ತದ್ದಕ್ಕೆ ಜನಪ್ರತಿನಿಧಿಗಳಿಗು ಪ್ರತಿಭಟನಾಕಾರರು ಹಿಡಿಶಾಪ ಹಾಕಿದ್ದಾರೆ.