Breaking NewsPolitical News

ಮೈಸೂರು ಸಂಸದರ ಮೇಲೆ ಯಾಕೆ ಕ್ರ‌ಮ ಜರುಗಿಸಲಿಲ್ಲ: ವಿ ಎಸ್ ಉಗ್ರಪ್ಪ

ಬೆಂಗಳೂರು : ಮಾತೆತ್ತಿದರೆ ರಿಯಾಕ್ಷನ್ ಕೊಡುವ ಮೈಸೂರು ಸಂಸದ ಎಲ್ಲಿ ಹೋಗಿದ್ದಾರೆ ಎಂದು ಮಾಜಿ‌ ಸಂಸದ ವಿ ಎಸ್ ಉಗ್ರಪ್ಪ ಪ್ರಶ್ನೇ ಮಾಡಿದ್ದಾರೆ.

ಸಂಸತ್ತಿನಲ್ಲಿ ಸಂಸದರ ಅಮಾನತು ಮಾಡಿದನ್ನ ಖಂಡಿಸಿ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದರು.ಈ ವೇಳೆ ಮಾತನಾಡಿದ ಅವರು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಡಿಸೆಂಬರ್ 13, 2023 ಕರಾಳ ದಿನ.ದೇಶದ 145 ಕೋಟಿ ಜನರ ಹೃದಯವಾಗಿರುವ ಸಂಸತ್ ಭವನದ ಮೇಲೆ ದಾಳಿ ನೆಡೆದಿದೆ.

2001 ಡಿಸೆಂಬರ್ 13 ಆಗ ಪಾರ್ಲಿಮೆಂಟ್ ಹೊರಗೆ ದಾಳಿ ಆಗಿತ್ತು. ಈಗ ಮತ್ತೊಮ್ಮೆ ದಾಳಿ ಆಗಿದೆ.
ಈ ದೇಶದ ಸಂಸತ್ ರಕ್ಷಣೆ ಮಾಡಲಾಗದ ಮೋದಿಗೆ ಕೇಳಲು ಬಯಸುತ್ತೇನೆ. ನಿಮ್ಮ ಬೇಹುಗಾರಿಕೆ ಏನಾಗಿದೆ. ನಿಮ್ಮ ಇಂಟಲಿಜೆನ್ಸ್ ಏನು ಕೆಲಸ ಮಾಡ್ತಿತ್ತು. ಕಳೆದ ಮೂರು ತಿಂಗಳಿಂದ ದಾಳಿ ನಡೆಸಲು ತಯಾರಿ ನಡೆಸಿದ್ರು. ಯಾವ ಖಲಿಸ್ತಾನದ ನಾಯಕ ಪಾರ್ಲಿಮೆಂಟ್ ಮೇಲೆ ದಾಳಿ ಆಗುವ ಮಾತನಾಡಿದ್ದ. ಆದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಉತ್ತರ ಕೊಡಬೇಕಾದ ಸ್ಥಿತಿ ಇದ್ದರೂ ಪಾರ್ಲಿಮೆಂಟ್ ನಲ್ಲಿ ಉತ್ತರ ಕೊಡ್ತಿಲ್ಲ. ಸೂರತ್ ನಲ್ಲಿ ಡೈಮಂಡ್ ಪಾರ್ಕ್ ಉದ್ಘಾಟನೆಗೆ ಹೋಗ್ತಾರೆ. ಆದರೆ ದಾಳಿಯ ಬಗ್ಗೆ ಉತ್ತರ ಕೊಡಲಿಕ್ಕೆ ಆಗದ ಪ್ರಧಾಬಿ ದೇಶದಲ್ಲಿದ್ದಾರೆ. ಮೋದಿ ಆಧುನಿಕ ಭಸ್ಮಾಸುರ ಅಂತ ಹೇಳ್ತಾವೆ ಇದ್ದೀವಿ. ಈ ದೇಶದ ಸಾಮರಸ್ಯ ಹಾಳಾಗಿದೆ. ದೇಶದ ಗಡಿ ರಕ್ಷಣೆ ಮಾಡುವಲ್ಲಿ ವಿಫಲ ಆಗಿದೆ. ಬೆಲೆಏರಿಕೆ ತಡೆಯಲು ವಿಫಲ ಆಗಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ವಿಫಲ ಆಗಿದ್ದಾರೆ. ದೇಶಭಕ್ತರ ವೇಷ ಹಾಕಿಕೊಂಡರೆ ಆಗಲ್ಲ. ಈ ದೇಶದಲ್ಲಿ ಬಿಜೆಪಿ ಅವರು ನಕಲಿ ದೇಶಭಕ್ತರು. ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಯಾವ ಸಂಸತ್ ಸದಸ್ಯನಿಂದ ಪಾಸ್ ಪಡೆಯುತ್ತಾನೋ ಅವನ ಬಗ್ಗೆ ಸ್ಪಷ್ಟವಾಗಿ ಬರೆಯಬೇಕಾಗುತ್ತದೆ. ನಾನು ಸ್ಪೀಕರ್ ಓಂ ಬಿರ್ಲಾಗೆ ಕೇಳುತ್ತೇನೆ. ಮೈಸೂರು ಸಂಸದರ ಮೇಲೆ ಯಾಕೆ ಕ್ರ‌ಮ ಜರುಗಿಸಲಿಲ್ಲ. ಮಾತೆತ್ತಿದರೆ ರಿಯಾಕ್ಷನ್ ಕೊಡುವ ಮೈಸೂರು ಸಂಸದ ಎಲ್ಲಿ ಹೋಗಿದ್ದಾರೆ. ನಾಪತ್ತೆಯಾಗಿ ಹೋಗಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವರದಿ : ಬಸವರಾಜ ಹೂಗಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!