ಬೆಂಗಳೂರು: ಮೊದಲಿಗೆ ಅದು ಆ್ಯಕ್ಸಿಡೆಂಟ್ ಕೇಸ್, ನಂತರ ಅದಾಗಿದ್ದು ಕೊಲೆ ಕೇಸ್. ರಸ್ತೆಯಲ್ಲಿ ನಡೆದ ಗಲಾಟೆಯಲ್ಲಿ ವೃದ್ಧ ಸಾವನ್ನಪ್ಪಿದ್ದಾರೆ.
77 ವರ್ಷದ ಕೃಷ್ಣಪ್ಪ ಮೃತ ದುರ್ದೈವಿ. ನವೆಂಬರ್ 16 ರಂದು ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಮೆಡಿಸಿನ್ ತರಲು ಹೋಗುತ್ತಿದ್ದ ವೃದ್ಧ.ಆಗ ಕೃಷ್ಣಪ್ಪನ ಬೈಕ್ ಗೆ ಸರ್ಫರಾಜ್ ಖಾನ್ ಡಿಕ್ಕಿ ಹೊಡಿದಿದ್ದ.ನಂತರ ಕೃಷ್ಣಪ್ಪ , ಖಾನ್ ಮೇಲೆ ಕೂಗಾಡಿದ್ದರು, ಸರಿಯಾಗಿ ಬೈಕ್ ಓಡಿಸುವಂತೆ ಹೇಳಿದ್ದರು.ಆಗ ಕೃಷ್ಣನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಸರ್ಫರಾಜ್ ಖಾನ್.ನಂತರ ಅಲ್ಲಿಂದ ಸರ್ಫರಾಜ್ ಖಾನ್ ಪರಾರಿಯಾಗಿದ್ದಾನೆ.ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅನಂತರ ಕೃಷ್ಣಪ್ಪ ಮೃತಪಟ್ಟಿದ್ದರು.ನವೆಂಬರ್ 17 ರಂದು ಕೃಷ್ಣಪ್ಪನವರ ಮಗ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದ್ರು.ಆಗ ಕೃಷ್ಣಪ್ಪನವರ ಮೇಲೆ ಹಲ್ಲೆ ಆಗಿರೋದು ಗೊತ್ತಾಗಿತ್ತು.ಆಗ ವಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದ ಕೃಷ್ಣಪ್ಪನ ಮಗ ಸತೀಶ್.ವಯಾಲಿಕಾವಲ್ ಪೊಲೀಸರಿಂದ ಖಾನ್ ಬಂಧನ ಮತ್ತು ಖಾನ್ ಮೇಲೆ ರೌಡಿಶೀಟರ್ ಓಪನ್.ಈ ಘಟನೆ ಸಂಬಂಧ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.