ಬೆಂಗಳೂರು : ದೇಶಾದ್ಯಂತ ಕೊರೊನಾ ವೈರಸ್ನ ಜೆಎನ್ 1 ಉಪ ತಳಿಯ ಒಟ್ಟು 20 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಕರ್ನಾಟಕದಲ್ಲಿ ಕೋವಿಡ್ ಸೋಂಕಿನಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಂಗಳವಾರ ವಿಕಾಸ ಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅದರಲ್ಲಿ ಗುಂಡೂರಾವ್ ಭಾಗವಹಿಸಿದ್ರು ಸಭೆಯ ನಂತರ ವಿಕಾಸ ಸೌಧದಲ್ಲಿ ಮಾಧ್ಯಮದೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ , ರಾಜ್ಯದಲ್ಲಿ ನಿನ್ನೆ ಕೊರೊನಾ ವೈರಸ್ ಸೋಂಕಿಗೆ 64 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪಡೆದಿದೆ. JN.1 ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ದೇಶದಲ್ಲಿ 20 JN.1 ಪ್ರಕರಣಗಳು ಪತ್ತೆಯಾಗಿವೆ. ಗೋವಾದಲ್ಲಿ 18, ಮಹಾರಾಷ್ಟ್ರದಲ್ಲಿ 1, ಕೇರಳದಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ಗುಂಡೂರಾವ್ ಮಾಹಿತಿ ನೀಡಿದ್ರು, ಕೋವಿಡ್ ಕುರಿತು ಗುರುವಾರ ತಾಂತ್ರಿಕ ಸಲಹಾ ಸಮಿತಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಶನಿವಾರದೊಳಗೆ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಲಿದ್ದೇವೆ. 5000 ಟೆಸ್ಟಿಂಗ್ ಮಾಡುವ ಗುರಿ ಹೊಂದಿದ್ದೇವೆ. ಶನಿವಾರದೊಳಗೆ ಎಲ್ಲಾ ಔಷಧಿ ಆಸ್ಪತ್ರೆಗೆ ತಲುಪುವಂತೆ ಮಾಡಲಿದ್ದೇವೆ. ಸಿಎಂ ಜೊತೆ ನಾಳೆ TAC ಮೀಟಿಂಗ್ ಇದೆ. ಮುಂದಿನ ನಿರ್ಧಾರ ನಾಳೆಯ ಮೀಟಿಂಗ್ ನಂತರ ತೆಗೆದುಕೊಳ್ಳುತ್ತೇವೆ. ವೆಂಟಿಲೇಟರ್ ಮೇಟೆನ್ಸ್ ಗೆ ಕೇಂದ್ರದಿಂದ ಅನುದಾನ ಕೇಳಿದ್ದೇವೆ. ICMR ಕೋವಿಡ್ ಮಾಹಿತಿ ಸಿಗುತ್ತಿಲ್ಲ. ನ್ಯೂಇಯರ್ ಹಾಗೂ ಕ್ರಿಸ್ ಮಸ್ ಬಗ್ಗೆ ಸದ್ಯ ಯಾವುದೇ ನಿಬಂಧನೆ ನಿರ್ಧಾರ ಮಾಡಿಲ್ಲ. ಜನಸಂದಣಿ ಇದ್ದಲ್ಲಿ ಮಸ್ಕ್ ಹಾಕಿದ್ರೆ ಉತ್ತಮ. ನಾಳೆ ತಾಂತ್ರಿಕ ಸಲಹಾ ಸಮಿತಿ ಜೊಗೆ ಸಿಎಂ ಸಭೆ ನಡೆಸಲಿದ್ದಾರೆ ಎಂದಿದ್ದಾರೆ.