ಬೆಂಗಳೂರು: ಬೆಂಗಳೂರು ಗ್ರಾಮಾಂತರ ಎಂದು ಯಾಕೆ ಹೆಸರಿಟ್ರು , ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ , ಆನೇಕಲ್ , ಕನಕಪುರ, ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ್ದು. ಆದ್ರೆ ಬೆಂಗಳೂರು ಕಿಟ್ಟಿದ್ದು, ಕೆಂಪೇಗೌಡರು.
ಆ ಹೆಸರು ಉಳಿಸಿಕೊಳ್ಳೊಕ್ಕೆ ನೋಡಿದ್ದೇವೆ. ನಾನು ನಮ್ಮ ಜನರಿಗೆ ತಿಳಿ ಹೇಳಬಾರದೇ? ನನ್ನ ಆಸ್ತಿ ವಿದ್ಯಾಕ್ಷೇತ್ರಕ್ಕೆ ಎಷ್ಟು ದಾನಮಾಡಿದ್ದೇನೆ ಗೊತ್ತಿದ್ಯಾ? ಅದರ ಬಗ್ಗೆ ನಿಮಗೇನಾದ್ರೂ ಅರಿವಿದ್ಯಾ? ಎಂದು ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದಾರೆ. ನೀವು ರಾಮನಗರ ಜಿಲ್ಲೆ ಮಾಡಿದ್ರಿ ಶುಭಹಾರೈಸ್ತೀನಿ. ಅಸೆಂಬ್ಲಿಯಲ್ಲಿ ಡಿಬೇಟ್ ಆಗಲಿ,ಇಲ್ಲಿ ಬೇಡ. ನಿಮ್ಮದು ಏನಿದು ಎಲ್ಲ ಅಲ್ಲಿಗೆ ತನ್ನಿ. ಡಿಬೇಟ್ ಮಾಡೋಣ. ನಾನು ರಾಮನಗರ ಜಿಲ್ಲೆ ಪ್ರತಿನಿಧಿಸ್ತೇನೆ. ಜನ ನನ್ನನ್ನ ಆಶೀರ್ವದಿಸಿದ್ದಾರೆ. ಜನರ ಒಳಿತಿಗೆ ನಾವು ಏನಾದ್ರೂ ಮಾಡಬೇಕಲ್ವಾ?ನಮ್ಮದು ಬೆಂಗಳೂರು ಅಲ್ವಾ?ಇತಿಹಾಸದ ಗೆಜೆಟ್ ತೆಗೆದು ತೋರಿಸಲಾ?ಗೆಜೆಟ್ ನಲ್ಲಿ ಕನಕಪುರ ಎಲ್ಲಿದೆ ಅಂತ.
ನಾನು ಕನಕಪುರ ಬೆಂಗಳೂರಿಗೆ ಸೇರಿಸ್ತೇನೆ ಅಂದಿಲ್ಲ. ರಾಮನಗರ,ಚನ್ನಪಟ್ಟಣ,ಕನಕಪುರ ಬೆಂಗಳೂರಿಗರು. ಅದಕ್ಕೆ ನಾನು ಹೇಳಿದ್ದೇನೆ. ಬೆಂಗಳೂರನ್ನ ಇಡೀ ವಿಶ್ವ ನೋಡ್ತಿದೆ. ಆಸ್ತಿ ಮಾರಿಕೊಳ್ಳಬೇಡಿ ಎಂದು ಜನರಿಗೆ ಹೇಳಿದ್ದೆ. ರಾಮನಗರದಲ್ಲಿ ನೀವು ಎಷ್ಟು ಜಮೀನು ತೆಗೆದುಕೊಂಡ್ರಿ?ಅಲ್ಲಿ ಎಷ್ಟು ಮೌಲ್ಯ ಮಾಡಿದ್ರಿ ಹೇಳಿ. ನಾನು ನಿಮ್ಮ ವೈಯಕ್ತಿಕ ವಿಚಾರ ತೆಗೆಯಲ್ಲ ಎಂದು ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.