State News

ಮುಂಗಾರು ಮತ್ತಷ್ಟು ವಿಳಂಬ, ರೈತರಿಗೆ ಸಂಕಷ್ಟ..!

ರಾಜ್ಯಕ್ಕೆ ಪ್ರತಿ ವರ್ಷ ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರ ಬರುತ್ತಿದ್ದ ಮುಂಗಾರು ಈ ಬಾರಿ ಜೂನ್‌ ಎರಡನೇ ವಾರವಾದರೂ ಇನ್ನು ಆಗಮಿಸಿಲ್ಲ. ಸದ್ಯ ಜೂನ್‌ 7ಕ್ಕೆ ಆಗಮಿಸಲಿದೆ ಎಂಬ ನಿರೀಕ್ಷೆ ಕೂಡಾ ಹುಸಿಯಾಗುವ ಸಾಧ್ಯತೆ ಇದೆ.

monsoon hardship for farmers

ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ದೇಶದ ರೈತರಿಗೆ ಮತ್ತೊಮ್ಮೆ ಕೊಂಚ ನಿರಾಸೆಯಾಗುವ ಸುದ್ದಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅರಬ್ಬಿ ಸಮುದ್ರದಲ್ಲಿಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಾಗೂ ಸಂಭವನೀಯ ವಾಯುಭಾರ ಕುಸಿತದಿಂದಾಗಿ ಮುಂಗಾರು ಆಗಮನ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಾರುಗಳ ಪ್ರವೇಶದ ಬಗ್ಗೆ ಇಲಾಖೆಯು ಹೊಸದಾಗಿ ಯಾವುದೇ ಅಂದಾಜು ದಿನಾಂಕ ನೀಡಿಲ್ಲ. ಈ ಮುನ್ನ, ನಾಲ್ಕು ದಿನ ತಡವಾಗಿ ಜೂನ್‌ 4ಕ್ಕೆ ಕೇರಳ ತೀರಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಇಲಾಖೆ ಹೇಳಿತ್ತು. ಬಳಿಕ ಜೂನ್‌ 7ಕ್ಕೆ ಆಗಮನವಾಗುವ ನಿರೀಕ್ಷೆಯಿದೆ ಎಂದಿತ್ತು. ಆ ನಿರೀಕ್ಷೆಯೂ ಹುಸಿಯಾಗುವ ಸಾಧ್ಯತೆಯಿದೆ.

monsoon hardship for farmers

”ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಇದ್ದು, ಅದು ಮುಂದಿನ ಎರಡು ದಿನದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಹಾಗಾದಲ್ಲಿ, ಮುಂಗಾರು ಮಾರುತಗಳ ಚಲನೆ ಮೇಲೆ ಗಂಭೀರ ಪರಿಣಾಮವಾಗಲಿದೆ,” ಎಂದು ಇಲಾಖೆ ತಿಳಿಸಿದೆ..

ವರದಿ :- ಸುಚಿತ್ರ ನಿಂಗೇಗೌಡ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!