ವಿಧಾನಸಭೆ ಚುನಾವಣೆ (Vidhansabha election) ಸಮೀಪಿಸುತ್ತಿದ್ದಂತೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ (Uday garudachar) ಕ್ಷೇತ್ರದ ಮತದಾರರಿಗೆ ಕುಕ್ಕರ್ ನೀಡಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದಿದ್ರು ಮತದಾರರ ಓಲೈಕೆಗೆ ಕುಕ್ಕರ್ ವಿತರಣೆ ಮಾಡಲಾಗಿದೆ. ಸಂಕ್ರಾಂತಿ ಅಂತ ತಮಿಳು ಜನಾಂಗದ ಮತದಾರರಿಗೆ ಕುಕ್ಕರ್ ವಿತರಣೆ ಮಾಡಿದ್ದರು.
ಈಗ ಅಲ್ಪಸಂಖ್ಯಾತ ಓಲೈಕೆಗೆ ಮುಸ್ಲಿಂ ಸಮುದಾಯದ ಮತದಾರರಿಗೆ ಕುಕ್ಕರ್ (Cooker) ನೀಡಿದ್ದಾರೆ. ಕ್ಷೇತ್ರದ ಸುಮಾರು 30 ಸಾವಿರ ಕ್ಕೂ ಹೆಚ್ಚು ಮತದಾರರಿಗೆ ಬಿಜೆಪಿ ಶಾಸಕ ಗರುಡಾಚಾರ್ ಕುಕ್ಕರ್ ನೀಡಿದ್ದಾರೆ. ಉದಯ್ ಗರುಡಾಚಾರ್ ನಡೆಗೆ ಬಿಜೆಪಿ ಶಾಸಕರಿಂದಲೇ ಬೇಸರ ವ್ಯಕ್ತವಾಗಿದೆ. ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಕಾರ್ಯ ಮಾಡದೇ ಈಗ ಮತದಾರರ ಓಲೈಕೆಗೆ ಕುಕ್ಕರ್ ಹಂಚಿಕೆ ಮಾಡಲಾಗಿದೆ.
ಇದನ್ನು ಓದಿ :- ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು ಪ್ರಕರಣ – ಮೃತದೇಹ ಇಟ್ಟು ಸ್ಥಳೀಯರಿಂದ ಪ್ರತಿಭಟನೆ…!