ತುಮಕೂರು : ತುಮಕೂರು ಜಿಲ್ಲೆಯತಿಪಟೂರು ತಾಲೂಕಿನ ಕರೀಕೆರೆ ಗ್ರಾಮದಲ್ಲಿ ರೈತನ ಶೆಡ್ಗೆ ಬೆಂಕಿ ಬಿದ್ದು ಜಾನುವಾರುಗಳು ಸಜೀವ ದಹನಗೊಂಡಿವೆ.
ಆಕಸ್ಮಿತಕವಾಗಿ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದ್ದು, ಶೆಡ್ ನಲ್ಲಿ ಇದ್ದ 10 ಸಾವಿರ ಕೊಬ್ಬರಿ ಸಂಪೂರ್ಣ ಭಸ್ಮವಾಗಿದೆ. ರೈತ ನಂದೀಶಯ್ಯಗೆ ಸುಮಾರು 8 ಲಕ್ಷ ರೂ. ನಷ್ಟವಾಗಿದೆ. ನೊಣವಿನಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳದಲ್ಲಿ ಸಂಪೂರ್ಣ ಸುಟ್ಟು ಹೋದ ಶೆಡ್, ಅದರಲ್ಲಿ ಸುಟ್ಟು ಕರಕಲಾದ ಪ್ರಾಣಿಗಳ ದೇಹಗಳು ಕಣ್ಣೀರು ಉಕ್ಕಿಸುತ್ತಿವೆ.