ಜೈಪುರದಲ್ಲಿ ಫೆ 9 ರಿಂದ13ರ ವರೆಗೆ ನಡೆಯುವ ಜೈಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಧೀರ್ ಅತ್ತಾವರ ನಿರ್ದೇಶನದ ಮ್ರತ್ಯೋರ್ಮ ಚಿತ್ರ ಇಂಡಿಯನ್ ಪನೋರಮಕ್ಕೆ ಆಯ್ಕೆ ಗೊಂಡು, ಅತ್ಯುತ್ತಮ ಚಿತ್ರ ಜ್ಯೂರಿ ಪ್ರಶಸ್ತಿಗೆ ಭಾಜನವಾಗಿದೆ.
![](https://rajnewskannada.in/wp-content/uploads/2024/02/WhatsApp-Image-2024-02-08-at-3.35.42-PM.png)
ಸುಮಾರು 67 ದೇಶಗಳಿಂದ 329 ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 101 ಚಲನಚಿತ್ರಗಳು ಸ್ಪರ್ಧಾ ಕಣದಲ್ಲಿತ್ತು. ತ್ರಿವಿಕ್ರಮ ಸಪಲ್ಯ ರವರು ದ್ರತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಿಸಿರುವ ಈ ಚಿತ್ರವು ಇತ್ತೀಚೆಗೆ ಮೂನ್ ವೈಟ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಸೇರಿ 4 ಪ್ರಶಸ್ತಿಗಳನ್ನು ಬಾಚಿಕೊಂಡು ಮಹಾರಾಷ್ಟ್ರ ಗವರ್ನರ್ ರಮೇಶ್ ಬಯಾಸ್ರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು.
![](https://rajnewskannada.in/wp-content/uploads/2024/02/WhatsApp-Image-2024-02-08-at-12.50.11-PM-1-939x1024.jpeg)
ಮಹರಾಷ್ಟ್ರ ಗವರ್ನರ್ ವಿಶೇಷವಾಗಿ ಚಿತ್ರವನ್ನು ಹೊಗಳಿದ್ದು, ರಾಜ್ಯಪಾಲರ ಅಧಿಕ್ರತ ವೆಬ್ಸೈಟ್ ನಲ್ಲೂ ಇದನ್ನು ದಾಖಲಿಸಿರುವುದು ವಿಶೇಷ.”ಮ್ರತ್ಯೋರ್ಮ” ಚಿತ್ರವು ಈಗಾಗಲೇ ಅಮೇರಿಕ, ಯುರೋಪ್, ಕೆನ್ಯಾ ದೇಶಗಳ ಹಲವಾರು ಚಿತ್ರೋತ್ಸವಗಳಲ್ಲೂ ಭಾಗವಹಿಸುತ್ತಿದೆ.