ಕೊಪ್ಪಳ : ಕೊಪ್ಪಳ ಕಿನ್ನಾಳ ಎಗ್ಗಿಲ್ಲದೆ ಅಕ್ರಮ ಮಣ್ಣು ಸಾಗಾಟ ಕಿನ್ನಾಳದ ಕುದರಿಮೋತಿ ಮಂಗಳೂರು ಹೋಗುವ ರಸ್ತೆಯ ಬಲ ಬದಿ ಹಿರೇಹಳ್ಳ ಅರಣ್ಯದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದೆ ಎಂದು ರಾಜ್ ನ್ಯೂಸ್ ರಿಯಾಲಿಟಿ ಚೆಕ್ ಮೂಲಕ ವರದಿ ಬಿತ್ತರಿಸಿತ್ತು. ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ ನ್ಯೂಸ್ ವರದಿಯ ಮೂಲಕ ಬಿಸಿ ಮುಟ್ಟಿಸಿತ್ತು.
ಹಿರೇಹಳ್ಳ ಯೋಜನೆ ಅಡಿಯಲ್ಲಿ ಸರ್ಕಾರಕ್ಕೆ ಭೂ ಸ್ವಾದೀನವಾಗಿರುವ ಜಮೀನಲ್ಲಿ ಪರವಾನಿಗೆ ಇಲ್ಲದೇ ಮರಂ ಕಳ್ಳತನ ಮಾಡಿರುವ ಟಿಪ್ಪರ್ ಚಾಲಕ ಮತ್ತು ಮಾಲೀಕರ ಮೇಲೆ, ದೂರು ಸಲ್ಲಿಸಿದ ಅಧಿಕಾರಿ, ಪಂಪಾಪತಿ ಡಿ.ಕೆ, ಸಹಾಯಕ ಕಾರ್ಯನಿರ್ವಾಹಕ ಅಭೀಯಂತರರು ಕೆ.ಎನ್.ಎನ್.ಐ ಹಿರೇಹಳ್ಳ ಪ್ರಾಜೆಕ್ಟ್ ಉಪವಿಭಾಗ ಕಿನ್ನಾಳ ಇವರು ಮರಂ ಸಾಗಾಟ ಮಾಡುವರ ವಿರುದ್ದ ದೂರು ಸಲ್ಲಿಸುವ ಮೂಲಕ ಅಕ್ರಮ ದಂದೆ ಕೊರರ ವಿರುದ್ಧ ಸೆಡ್ಡು ಹೊಡೆದಿದ್ದರು ಆದರೆ ಅಕ್ರಮ ಕೋರರು ಮತ್ತೆ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದ್ದಾರೆ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಹಿರೇಹಳ್ಳ ಯೋಜನೆ ಅಧಿಕಾರಿ ಪಂಪಾಪತಿ ಅವರು ನೇರವಾಗಿ ಕಾರಣ ಎಂದು ಕಲಕೇರಿ ಗ್ರಾಮ ಪಂಚಾಯತ ಮೆಂಬರ್ ಆರೋಪಿಸಿದ್ದಾರೆ.
ಈ ಹಿಂದೆ ಕೊಪ್ಪಳ ಗ್ರಾಮೀಣ ಪೊಲೀಸ್ ಎಫ್ಐಆರ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ ಆದರೂ ಅಕ್ರಮ ಮಣ್ಣುಸಾಗಾಟ ನಿಂತಿಲ್ಲ ಎಂಬುದು ವಿಪರ್ಯಾಸ.
ವರದಿ : ಸಿದ್ದಲಿಂಗಯ್ಯ. ಹಿರೇಮಠ