ಆನೆ ದಂತಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿ.ಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಶಾಲೆವೊಂದರ ಬಳಿ ಮಾರಾಟಕ್ಕೆ ಯತ್ನಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಸಿಕೆ ಅಚ್ಚುಕಟ್ಟು ಪೊಲೀಸರು ದಾಳಿ ನಡೆಸಿ, 29 ಕೆ.ಜಿ ತೂಕದ ಎರಡು ದಂತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಸನ ಮೂಲದ ಚಂದ್ರೇಗೌಡ, ಹಾವೇರಿ ಮೂಲದ ಸೋಮಲಿಂಗಪ್ಪ, ಪ್ರವೀಣ್ ಗುಳೇದ್ ಆರೋಪಿಗಳಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.