ರಾಜ್ಯದ ಜನತೆಗೆ ಬಸವ ಜಯಂತಿ ಶುಭಾಶಯಗಳು. ಬಸವ ಜಯಂತಿಯ ಜೊತೆಗೆ ಇಂದು ಬಿಜೆಪಿಗೆ ಸಿಹಿ ಸಿಕ್ಕಿದೆ. ಹೊರಟ್ಚಿ ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಡೀ ಕರ್ನಾಟಕದಲ್ಲಿ ವರ್ಚಸ್ಸು ಬಿಜೆಪಿಗೆ ಬರುತ್ತೆ. ಸಜ್ಜನ ಸರಳಿಕೆ ಇರುವಂತಹ ವ್ಯಕ್ತಿ ಬಸವರಾಜ್ ಹೊರಟಿ ಎನ್ನಲು ಹೋಗಿ ಬಸವರಾಜ್ ಬೊಮ್ಮಾಯಿ ಅಂದಿದ್ದಾರೆ. ಬಳಿಕ ಸರಿಪಡಿಸಿಕೊಂಡು ಹೊರಟ್ಟಿ ಎಂದು ಹೇಳಿದರು. ಇದನ್ನು ಓದಿ:-ನಾಯಕತ್ವ ಬದಲಾವಣೆ ಬರೀ ಕಪೋಲ ಕಲ್ಪಿತ – ಅರುಣ್ ಸಿಂಗ್
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು
ನಾಯಕತ್ವದ ಪ್ರಶ್ನೆ ಮಾಧ್ಯಮದಲ್ಲಿ ಬಂದಿದೆ ಅಷ್ಟೇ. ಕೇಂದ್ರದ ಸಹಕಾರ ಸಂಪೂರ್ಣವಾಗಿ ಬೊಮ್ಮಾಯಿ ಮೇಲಿದೆ. ಯಾರು ಕೂಡ ಹಗಲು ಕನಸು ಕಾಣಬೇಡಿ. ಬಿಸಿಲು ಕುದುರೆ ಹಿಂದೆ ಹೋಗಬೇಡಿ. ಬೊಮ್ಮಾಯಿ ಯವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಸ್ವ ಪಕ್ಷದವರಿಗೆ ಆರ್ . ಅಶೋಕ್ ಟಾಂಗ್ ನೀಡಿದ್ದಾರೆ.
ಇದನ್ನು ಓದಿ:-ರಾಜ್ಯಕ್ಕೆ ಅಮಿತ್ ಶಾ ಭೇಟಿ – ನಾಯಕತ್ವ ಬದಲಾವಣೆ ಕುರಿತು ಹೆಚ್ಚಿದ ಕುತೂಹಲ