ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಿಜೆಪಿಯವರಿಗೆ ಭಯ ಶುರುವಾಗಿದೆ. ಹೀಗಾಗಿ ಜೆಡಿಎಸ್ ಪ್ರಾಬಲ್ಯ ಇರೋ ಭಾಗದಲ್ಲಿ ಟಾರ್ಗೆಟ್ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕುಟುಂಬ ರಾಜಕಾರಣ ವಿಚಾರವಾಗಿ ದೇವೇಗೌಡ ಕುಟುಂಬ ಟಾರ್ಗೆಟ್ ಮಾಡಲಾಗ್ತಿದೆ. ಕುಟುಂಬ ರಾಜಕಾರಣದ ಪ್ರಶ್ನೆ ಇಲ್ಲಿ ಬರಲ್ಲ.
ನಮ್ಮಕುಟುಂಬದ ಶಕ್ತಿ ಮಣಿಸಲು ಪದೇ ಪದೇ ನಮ್ಮಕುಟುಂಬವನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಡಿಕೆ ಶಿವಕುಮಾರ್ ಕುಟುಂಬ ಇಲ್ವಾ? ಪ್ರತಿ ಬಾರಿಯೂ ನಮ್ಮ ಕುಟುಂಬದ ಬಗ್ಗೆ ಮಾತನಾಡ್ತಾರೆ ಎಂದು ಕಿಡಿಕಾರಿದ್ರು.
ಪಕ್ಷಕ್ಕೆ ಠೇವಣಿ ಇಲ್ಲದಂತೆ ಮಾಡ್ತೇನೆ ಎಂಬ ಬೆಮಲ್ ಕಾಂತರಾಜು ಹೇಳಿಕೆಗೆ ಕಿಡಿಕಾರಿದ ಹೆಚ್ಡಿಕೆ ಯಾವುದೇ ಪಕ್ಷಕ್ಕೂ ಯಾರೂ ಅನಿವಾರ್ಯ ಅಲ್ಲ. ಅವರು ದೊಡ್ಡವರಿದ್ದಾರೆ. ಹೇಳಿಕೊಂಡು ಓಡಾಡ್ತಿದ್ದಾರೆ ಓಡಾಡಲಿ ಬಿಡಿ ಎಂದು ಹೇಳಿದ್ರು.
ಇದನ್ನೂ ಓದಿ : – ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ದಾಳಿ ಪ್ರಕರಣ – ತಪ್ಪಿತಸ್ಥರ ಸುಮ್ಮನೆ ಬಿಡಲ್ಲ ಎಂದ ಸಿಎಂ ಭಗವಂತ್ ಮಾನ್