‘ಕಾಂಗ್ರೆಸ್ಸಿಗರಿಗೆ ರಾಜಕೀಯ ಬಿಟ್ರೆ ಬೇರೆ ಏನೂ ಗೊತ್ತಿಲ್ಲ’. ಅವರು ಎಲ್ಲದರಲ್ಲೂ ರಾಜಕಾರಣ ಮಾಡ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಆದಿಚುಂಚನಗಿರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅವರ ಲೋಪಗಳನ್ನ ಮುಚ್ಚಿಕೊಳ್ಳಲು ಈ ರೀತಿ ಸ್ಟೇಟ್ ಮೆಂಟ್ ಕೊಡ್ತಾರೆ. ಹಿಜಾಬ್ ಯಾರು ಪ್ರಾರಂಭ ಮಾಡಿದ್ದು ಅನ್ನೋದು ಜಗತ್ತಿಗೆ ಗೊತ್ತಿದೆ. ಅದನ್ನೆಲ್ಲ ನೀವೇ ತೋರಿಸಿದ್ದೀರಿ.
ಅದರ ಹಿಂದಿರುವ ಶಕ್ತಿಗಳೆಲ್ಲ ಕಾಂಗ್ರೆಸ್ ಮಿತ್ರರೇ. ಎಲ್ಲವನ್ನೂ ಕಾನೂನು ಬಾಹಿರವಾಗಿ ಮಾಡೋದು. ಅದನ್ನ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿಕೊಂಡು ಹೋಗೋದು. ಇದೊಂದು ರೂಢಿ ಆಗೋಗಿದೆ ಅವರಿಗೆ. ಅದಕ್ಕೆಲ್ಲ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಕಾಂಗ್ರಸ್ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ :- ಕೋಲಾರದಲ್ಲಿ ಮುಂದುವರೆದ ವರುಣಾರ್ಭಟ