ಶಿಕ್ಷಣ ಸಚಿವರ ಮನೆಗೆ NSUI ಕಾರ್ಯಕರ್ತರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ದಾಂಧಲೆ ನಡೆಸಿದವರನ್ನ ಬಂಧಿಸುವ ಬದಲು ಕಂಡಲ್ಲಿ ಗುಂಡಿಕ್ಕಿ. 6 ಮಂದಿ ಮುಸಲ್ಮಾನರು, ಇನ್ನುಳಿದಂತೆ ಹಿಂದೂಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲ ಏನು ಸಿವಿಲ್ ಉಗ್ರಗಾಮಿಗಳಾ ? ಹಾಸನ, ದಾವಣಗೆರೆ, ಬೆಂಗಳೂರಿನಿಂದ ಈ ತರ ಜನರನ್ನ ಕಳುಹಿಸಿ ಕೃತ್ಯ ನಡೆಸಿದ್ದಾರೆ. ಇದನ್ನೂ ಓದಿ : – ತುಮಕೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಸಚಿವರ ಮಗ ಶಾಕ್ ನಿಂದ ಮನೆಯಿಂದ ಹೊರ ಬಂದಿಲ್ಲ. ಸರ್ಕಾರಕ್ಕೆ ಪೊಲೀಸರಿಗೆ ನೇರವಾಗಿ ಹೇಳ್ತೇನೆ. ಇಂತಹವರಿಗೆ ಬರೀ ಶಿಕ್ಷೆ ಅಲ್ಲ ಕಂಡಲ್ಲಿ ಗುಂಡಿಕ್ಕಬೇಕು ಎಂದು ಹೇಳಿದ್ದಾರೆ. ನಾಲ್ಕರಲ್ಲಿ ಇನ್ನೆರಡು ವಾಹನ ಎಲ್ಲಿ, ಅದರಲ್ಲಿ ವೆಪನ್ ಇದ್ವು. ವೆಪನ್ ಇರುವ ವೆಹಿಕಲ್ ಇನ್ನುವರೆಗೂ ಹಿಡಿದಿಲ್ಲ. ಇದು ಸಚಿವ ನಾಗೇಶ್ ಮಾತ್ರವಲ್ಲ ಸಮಾಜದಲ್ಲಿ ಯಾರಿಗೂ ಆಗಬಾರದು ಎಂದು ತಿಳಿಸಿದ್ರು.
ಇದನ್ನೂ ಓದಿ : – ಬೀದಿಗೆ ಬಿದ್ದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಜಗಳ- ಡಿ ರೂಪಾ, ರಾಘವೇಂದ್ರ ಶೆಟ್ಟಿ ಪತ್ರ ಸಮರ