ಮಲೆನಾಡಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಜನರ ಗೋಳು ಹೇಳತೀರದಾಗಿದೆ. ಅದರಲ್ಲೂ ಚಿಕ್ಕಮಗಳೂರಿ( chikkamagaluru) ನಲ್ಲಿ ಕಾಫಿತೋಟಗಳು ನಾಶವಾಗಿದೆ.
ಅತೃವೃಷ್ಟಿಯಿಂದ ತತ್ತರಿಹೋದ ಜಿಲ್ಲೆಯ ಜನಪ್ರತಿನಿಧಿಗಳು ಶೃಂಗೇರಿ ಜಗದ್ಗುರು(Sringeri Jagadguru.) ಗಳಿಗೆ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕ ಟಿ. ಡಿ. ರಾಜೇಗೌಡ ( rajegowda) ಅತಿವೃಷ್ಟಿ ನಿಲ್ಲಿಸುವಂತೆ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಗಳಿಗೆ ಮೊರೆ ಹೋಗಿದ್ದಾರೆ. ಶಾರದಾಂಬೆಗೆ ಪೂಜೆ ಸಲ್ಲಿಸಿ ಮಳೆ ನಿಲ್ಲುವಂತೆ ಪ್ರಾರ್ಥಿಸಿದ್ದಾರೆ. ಶೃಂಗೇರಿಯಲ್ಲಿ ವಾಡಿಕೆ ಮಳೆಗಿಂತ ಈ ಬಾರಿ ಡಬಲ್ ಮಳೆ ಸುರಿದಿದೆ. ಇದನ್ನು ಓದಿ : – ಮಡಿಕೇರಿಯಲ್ಲಿ ಮಳೆಪೀಡಿತ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ- ಪರಿಹಾರ ಚೆಕ್ ವಿತರಣೆ
ಸಂತ್ರಸ್ತರಿಂದ ರಸ್ತೆ ತಡೆ
ಈ ನಡುವೆ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ( Shobha Karandlaje ) ಭೇಟಿ ನೀಡಿದ್ದಾರೆ. ಗುಡ್ಡೆತೋಟದಲ್ಲಿ ಸಂತ್ರಸ್ಥರನ್ನ ಮಾತನಾಡಿಸದೇ ಹೋದ ಹಿನ್ನೆಲೆಯಲ್ಲಿ ಏಕಾಏಕಿ ಪ್ರತಿಭಟನೆಗೆ ಇಳಿದ ಸಂತ್ರಸ್ಥರು ರಸ್ತೆ ತಡೆ ನಡೆಸಲು ಮುಂದಾದ್ರು. ಹೊರನಾಡು ಶೃಂಗೇರಿ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ್ರು. ಕೊಪ್ಪ ತಾಲೂಕಿನ ಗುಡ್ಡೆ ತೋಟ ಕುಸಿತ ಸ್ಥಳ ವೀಕ್ಷಿಸಿ ತೆರಳಿದ ಕೇಂದ್ರ ಸಚಿವೆ ಕರಂದ್ಲಾಜೆ ಜನರನ್ನ ಬಳಿ ಅಹವಾಲು ಸ್ವೀಕರಿಸಿರಲಿಲ್ಲ.
ಕೊಚ್ಚಿ ಹೋದ ಚಿಂದಿ ಆಯೋ ವ್ಯಕ್ತಿ
ಇನ್ನೊಂದೆಡೆ ಚಿಂದಿ ಆಯಲು ಹೋಗಿ ನೋಡ ನೋಡುತ್ತಿದ್ದಂತೆ ಜನರ ಎದುರೇ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ಹಳ್ಳದಲ್ಲಿದ್ದ ನೀರಿನ ಖಾಲಿ ಬಾಟಲ್ ಸಂಗ್ರಹಿಲು ಹೋಗಿ ಕೊಚ್ಚಿ ಹೋಗಿದ್ದಾನೆ. ಚಿಕ್ಕಮಗಳೂರು ನಗರದ ಉಂಡೆದಾಸರಹಳ್ಳಿ ಯಲ್ಲಿ ಸುಮಾರು 40 ವರ್ಷದ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಮಳೆಯ ನಡುವೆಯೇ ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನು ಓದಿ : – ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವ ಪತನ ಕಾಣಲಿದೆ – ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ