ಐತಿಹಾಸಿಕ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ. ಸಂಗಮನಾಥ ದೇವರ ಮೂರ್ತಿಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಬೆಲೆಬಾಳುವ ಪಂಚಲೋಹದ ಸಂಗಮನಾಥ ಮೂರ್ತಿ (Sangamanatha murthy) , ಹಿತ್ತಾಳೆಯ ಬಸವಣ್ಣ (Basavanan) ನ ಮೂರ್ತಿ, ಇತರೆ ಹಿತ್ತಾಳೆ, ತಾಮ್ರದ ಸಾಮಾನುಗಳು ಕಳ್ಳತನವಾಗಿದೆ. ಕಳ್ಳರು ದೇವಸ್ಥಾನದ ಬಾಗಿಲಿನ ಕೀಲಿ ಮುರಿದು ಕಳ್ಳತನ ಮಾಡಿದ್ದಾರೆ.
ದೇಗುಲದ ಅರ್ಚಕ ಮಲ್ಲಯ್ಯ ಮಠಪತಿ ನಸುಕಿನ ಜಾವ ಸಂಗಮನಾಥ ದೇವಸ್ಥಾನಕ್ಕೆ ಹೋದಾಗ ಮೂರ್ತಿ ಕಳ್ಳತನವಾಗಿರೋದು ಗೊತ್ತಾಗಿದೆ. ಬಳಿಕ ಅರ್ಚಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ : – ಮಲೆನಾಡಿನಲ್ಲಿ ಅತಿವೃಷ್ಟಿ ಅಬ್ಬರ – ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಜನಪ್ರತಿನಿಧಿಗಳು