ಡಿಕೆಶಿ ಉತ್ಸವದ ಬಗ್ಗೆ ಬೆಂಬಲಿಗರ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( D.K SHIVKUMAR ) ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು ನನಗೆ ಯಾವ ಉತ್ಸವವೂ ಬೇಡ. ನನ್ನ ಹುಟ್ಟು ಹಬ್ಬಕ್ಕೆ ಜಾಹೀರಾತು ಕೊಡ್ತೇವೆ ಅಂದ್ರು ನನ್ನ ಹಲವು ಅಭಿಮಾನಿಗಳು. ನಾನೇ ಬೇಡ ಅಂತಾ ಹೇಳಿದ್ದೆ. ಬೇರೆಯವರಿಗೆ ತೊಂದರೆ ಬೇಡ ಎಂದು ಕರೆ ನೀಡಿದ್ದೆ. ನಾವು ಕುಟುಂಬದ ಜೊತೆ ಕೇದಾರನಾಥಗೆ ಹೋಗಿದ್ದೆವು. ರಾಜು ಪತ್ರ ಬರೆದಿರೋದು ಅವರ ವೈಯಕ್ತಿಕ ವಿಚಾರ. ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಅಧಿಕಾರ ಸ್ವೀಕರಿಸುವಾಗಲೇ ಹೇಳಿದ್ದೇನೆ. ವ್ಯಕ್ತಿ ಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದು. ಇವತ್ತು ಅದನ್ನೇ ಹೇಳ್ತೇನೆ. ನನಗೆ ಪಾರ್ಟಿ ಉತ್ಸವ ಬೇಕು ವಿಧಾನಸೌಧದಲ್ಲಿ ಪಾರ್ಟಿಯನ್ನ ಕೂರಿಸಬೇಕು ಅಷ್ಟೇ ಎಂದು ಹೇಳಿದ್ರು. ಇದನ್ನು ಓದಿ : – ‘ಶಿವಕುಮಾರೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಿ – ಡಿಕೆಶಿ ಶಿಷ್ಯನಿಂದ ಪತ್ರ
ಲಕ್ಷ್ಮೀ ಹೆಬ್ಬಾಳ್ಕರ್ ಬಿಎಸ್ ವೈ ಭೇಟಿ ವಿಚಾರ
ವೈಯಕ್ತಿಕವೋ ಅಥವಾ ರಾಜಕೀಯ ವಿಚಾರವೋ ಗೊತ್ತಿಲ್ಲ. ಯಾವ ವಿಚಾರವಾಗಿ ಭೇಟಿಯಾಗಿದ್ದಾರೋ ನನಗೆ ಗೊತ್ತಿಲ್ಲ. ಅವರೂ ಒಬ್ಬರು ಶಾಸಕಿ, ಎಲ್ಲರೂ ಎಲ್ಲಾ ಪಾರ್ಟಿಯ ಹಿರಿಯರನ್ನ ಭೇಟಿಯಾಗ್ತಾರೆ ಎಂದು ತಿಳಿಸಿದ್ರು.
ಮುಂದಿನ ಚುನಾವಣೆಯ ಬಳಿಕ ಕಾಂಗ್ರೆಸ್, ( congress) ಜೆಡಿಎಸ್ ಎರಡೂ ಪಾರ್ಟಿ ಇರಲ್ಲ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 10, 15 ವರ್ಷ ಸಾಕಾ…? 10,15 ವರ್ಷಗಳ ನಂತರವಾದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅಂತಾ ಗೊತ್ತಲ್ಲಾ ಅವರಿಗೆ ಎಂದು ಆರ್. ಅಶೋಕ್ ಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನು ಓದಿ : – ರಾಜ್ಯದ ಸಾಹಿತಿಗಳು, ಬರಹಗಾರರು ಪ್ರತಿಪಕ್ಷಗಳ ನಾಯಕರುಗಳಿಗೆ ಬರುತ್ತಿರುವ ಜೀವ ಬೆದರಿಕೆ ಕರೆಗಳನ್ನು ಸರ್ಕಾರ ನಿರ್ಲಕ್ಷಿಸ ಬಾರದು – ಸಿದ್ದರಾಮಯ್ಯ