ಪ್ರವೀಣ್ ನೆಟ್ಟಾರು (Praveen nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿ (Bengaluru) ನಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಮಾನ್ಯತಾ ಟೆಕ್ ಪಾರ್ಕ್ ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸುಳ್ಯದ ಇರ್ಫಾನ್, ಅಲ್ತಾಫ್ ಎಂಬುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಹತ್ಯೆ ಬಳಿಕ ಇವರು ಬೆಂಗಳೂರಿಗೆ ಬಂದಿದ್ದರು. ಹತ್ಯೆ ಆದ ದಿನ ಶಫೀಕ್, ಝಾಕೀರ್ ಜತೆಯಲ್ಲಿದ್ದರು.
ಮೊಬೈಲ್ ಟವರ್ ಲೋಕೆಷನ್ ಆಧಾರದ ಮೇಲೆ ಇವರನ್ನ ಬಂಧಿಸಲಾಗಿದೆ. ಹತ್ಯೆಯಾದ ನಂತರ ಬೆಂಗಳೂರಿಗೆ ಹಂತಕರು ವಾಪಾಸ್ ಬಂದಿದ್ದರು. ಅಷ್ಟು ಮಾತ್ರವಲ್ಲ ಆರೋಪಿಗಳು ಪ್ರವೀಣ್ ಹತ್ಯೆಗೆ ಫ್ರೀ ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಮೊದಲಿಗೆ ಪ್ರವೀಣ್ ಅಂಗಡಿಯ ಸುತ್ತ ಕರೆಂಟ್ ಕಟ್ ಮಾಡಿದ್ದರು. ಸುಮಾರು ೫೦೦ ಮೀಟರ್ ವ್ಯಾಪ್ತಿಯಲ್ಲಿ ಪವರ್ ಕಟ್ ಮಾಡಿದ್ರು. ಆ ಪ್ರದೇಶದಲ್ಲಿ ಕರೆಂಟ್ ಇಲ್ಲದಿದ್ದರಿಂದ ಸಿಸಿಟಿಯಲ್ಲಿ ಆರೋಪಿಗಳ ಚೆಹರೆ ಪತ್ತೆಯಾಗಿರಲ್ಲಿಲ್ಲ.
ಇದನ್ನು ಓದಿ :- ಭೂಕಬಳಿಕೆ ಆರೋಪ ಹಿನ್ನೆಲೆ – ಸಚಿವ ಶ್ರೀರಾಮುಲು ರಾಜೀನಾಮೆಗೆ ಎಸ್.ಆರ್.ಹೀರೆಮಠ್ ಆಗ್ರಹ