ಚಿಕ್ಕಮಗಳೂರಿ (Chikkamagaluru) ನಲ್ಲಿ ಆನೆ (Elephants) ಗಳು ಕಾಡಿ (Forest) ನಿಂದ ನಗರಕ್ಕೆ ಬಂದಿವೆ, ಜನ ಎಚ್ಚರಿಕೆಯಿಂದ ಇರಿ ಎಂದು ತಾಲೂಕು ಕೇಂದ್ರದ ಮುಖ್ಯ ರಸ್ತೆಯಲ್ಲಿ ಅರಣ್ಯ ಅಧಿಕಾರಿಗಳು ಅನೌನ್ಸ್ ಮಾಡಿದ್ದಾರೆ. ಮೂಡಿಗೆರೆ ಪಟ್ಟಣದ ರಾಜಬೀದಿಯಲ್ಲಿ ಆನೆಗಳು ರಾಜನಡಿಗೆ ತೋರಿಸಿವೆ.
ಮೂಡಿಗೆರೆ ಪಟ್ಟಣದ ಸರ್ಕಾರಿ ಆಸ್ಪತ್ರೆ, ತಾಲೂಕು ಪಂಚಾಯಿತಿ ಸಮೀಪವೇ ಆನೆಗಳು ಬಂದಿವೆ. ಪಟ್ಣದ ಮೇಗಲಪೇಟೆಯಲ್ಲಿ ಸರ್ಕಾರಿ ಕಚೇರಿಗಳು ಇವೆ. ಕಾಡಾನೆಗಳಿಂದ ಮೂಡಿಗೆರೆ ತಾಲೂಕಿನ ಜನ ಆತಂಕಗೊಂಡಿದ್ದಾರೆ. ಇದನ್ನೂ ಓದಿ : – ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ- ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ
ಕಾಡಿನಿಂದ ನಾಡಿಗೆ ಕಾಡಾನೆಗಳ ಹಿಂಡು ಬರ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಒಂದೂವರೆ ತಿಂಗಳಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ.
ಇದನ್ನೂ ಓದಿ : – ಮತ್ತೆ ರಾಜ್ಯ ಬಿಜೆಪಿ ಸರ್ಕಾರದ ಮಾನ ಹರಾಜು ಹಾಕಿದ ಉದ್ಯಮಿ ಮೋಹನ್ ದಾಸ್ ಪೈ !