ಕೇಂದ್ರ ಸರಕಾರ ದೇಶದ್ರೋಹಿ ಪಿಎಫ್ ಐ ( PFI ) ಸಂಘಟನೆ ನಿಷೇಧ ಮಾಡಿದೆ. ಅದಕ್ಕೆ ಕಾಂಗ್ರೆಸ್ ( CONGRESS ) ಮತ್ತು ದೇಶ ಭಕ್ತ ಮುಸ್ಲಿಂ ನಾಯಕರು ಬೆಂಬಲ ಕೊಡಬೇಕು ಎಂದು ಈಶ್ವರಪ್ಪ ( ESHWARAPPA )ಮನವಿ ಮಾಡಿದ್ದಾರೆ.
ಶಿವಮೊಗ್ಗ ( SHIVAMOGGA ) ದಲ್ಲಿ ಮಾತನಾಡಿದ ಅವರು ಪಿಎಫ್ ಐ ಕಾರ್ಯಕರ್ತರಿಗೆ ಬುದ್ದಿಹೇಳಬೇಕಿದೆ. ಪುನಃ ಬರುತ್ತೇವೆ. ಪಿಎಫ್ ಐಗೆ ಮರು ಜನ್ಮ ನೀಡುತ್ತೇವೆ ಎಂಬ ರೋಡ್ ಮತ್ತು ಗೋಡೆ ಬರಹಗಳನ್ನ ಹೇಡಿಗಳು ಮಾಡುತ್ತಿದ್ದಾರೆ. ಮುಂದೆ ಬಂದು ಈ ರೀತಿ ಮಾಡಿದರೆ ಸರಿಯಾಗಿ ಸರ್ಕಾರ ಬುದ್ಧಿ ಕಲಿಸುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ :- ಬಿಜೆಪಿಗೆ ದಮ್ಮು ತಾಕತ್ತು ಇದ್ದರೆ ಉತ್ತರಿಸಲಿ, ಬಿಜೆಪಿಗರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದೇಕೆ? – ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನೆ
ಪರೇಶ್ ಮೇಸ್ತ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ ಸಿಎಂ ಬೊಮ್ಮಾಯಿ ( BASAVARAJ BOMMAI ) ಕೇಂದ್ರ ನಾಯಕರಿಗೆ, ಅಮಿತ್ ಶಾಗೆ ಮನವಿ ಮಾಡ್ತೀನಿ. ಕುಟುಂಬಸ್ಥರು, ಸ್ನೇಹಿತರು ಇದು ಮುಸ್ಲಿಂ ಹೇಡಿಗಳ ಕೃತ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪರೇಶ್ ಮೇಸ್ತ ಪ್ರಕರಣ ಮರುತನಿಖೆ ಮಾಡಬೇಕು ಎಂದು ಒತ್ತಾಯ ಮಾಡ್ತೀನಿ ಎಂದು ಹೇಳಿದ್ರು. ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಸರಿಯಾಗಿ ತನಿಖೆ ಆಗಿಲ್ಲ, ಹಲವು ದಾಖಲೆಗಳನ್ನ ನಾಶ ಮಾಡಿದ್ದಾರೆ. ಸರಿಯಾದ ವರದಿ ಬಂದಿಲ್ಲ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣ ಮರುತನಿಖೆ ಆಗಬೇಕು ಎಂದು ನಾನೂ ಒತ್ತಾಯ ಮಾಡ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ :- ಕಾರ್ತಿಕ ಮಾಸದಿಂದ ಯುಗಾದಿಯವರೆಗೆ ಜನರಿಗೆ ತೊಂದರೆಯಾಗಲಿದೆ – ಕೋಡಿಮಠ ಸ್ವಾಮೀಜಿ ಭವಿಷ್ಯ