ಕಳೆದ ಐದು ದಿನದ ಹಿಂದೆ ವಿಜಯನಗರ (Vijayanagara) ದ ಹೊಸಪೇಟೆ (Hospete) ಯಲ್ಲಿ ರಸ್ತೆ ಅಪಘಾತವಾಗಿತ್ತು. ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರು ಯುವಕರಿಗೆ ವೇಗವಾಗಿ ಬಂದು ಕಾರು (Car) ಗುದ್ದಿತ್ತು. ಈ ವೇಳೆ ನೀಲಕಂಠ ಎಂಬ ಯುವಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಮತ್ತೊಬ್ಬ ಯುವಕ ಪವನ್ ತಲೆಗೆ ಪೆಟ್ಟಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿದ್ದರು.
ಪವನ್ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿ ಕಿಮ್ಸ್ ನಿಂದ ಮೃತ ದೇಹ ಹೊಸಪೇಟೆಗೆ ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪವನ್ ಮನೆ ಎದುರು ನೂರಾರು ಜನ ಜಮಾಯಿಸಿದ್ದಾರೆ. ಬದುಕಿ ಬಾಳಬೇಕಿದ್ದ ಯುವಕ ಇಂದು ಕೊನೆಯುಸಿರೆಳೆದಿದ್ದಾರೆ. ಪವನ್ ಎರಡನೇ ವರ್ಷ b.com ಓದುತ್ತಿದ್ರೆ, ನೀಲಕಂಠ ಮೊದಲ ವರ್ಷ ITI ಓದುತ್ತಿದ್ದರು.
ಇದನ್ನೂ ಓದಿ :-ಒಂದೆಡೆ ದಸರಾ ಸಂಭ್ರಮ.. ಕೋಲಾರದಲ್ಲಿ ದಲಿತರ ಮೇಲೆ ಹಲ್ಲೆ ಮಾಡುವ ಮೂಲಕ ದೌರ್ಜನ್ಯ