ಚಿಕ್ಕಮಗಳೂರಿ(Chikkamagaluru) ನಲ್ಲಿ ಕಾಶ್ಮೀರ ಪಂಡಿತರಿಗೆ ಶೃಂಗೇರಿ (Sringeri) ಶ್ರೀ ಶಾರದೆಯ ನೂತನ ವಿಗ್ರಹವನ್ನು ಮಠದಿಂದ ಹಸ್ತಾಂತರಿಸಿದ್ದಾರೆ. ವಿಜಯದಶಮಿ (Vijayadashami) ಯಂದು ನೂತನ ವಿಗ್ರಹಕ್ಕೆ ಉಭಯ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಶ್ಮೀರ (Kashmir) ಪಂಡಿತರಿಂದಲೂ ಆದಿಶಕ್ತಿ ನೆಲದ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ.
ಶೃಂಗೇರಿಯಿಂದ ಕಾಶ್ಮೀರದ ನೀಲಂಕಣಿವೆಯ ತ್ರೀತ್ವಾಲ್ ಗೆ ಶಾರದೆಯ ವಿಗ್ರಹವನ್ನು ರವಾನೆ ಮಾಡಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿಯ ನಂತ್ರ ಉತ್ತರಾಯಣ ಸಮಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಶಂಕರಾಚಾರ್ಯರು ಕಾಶ್ಮೀರವನ್ನು ಸರ್ವಜ್ಞ ಪೀಠರೋಹಣ ಮಾಡಿದರು. ಇದನ್ನೂ ಓದಿ :-ಒಂದೆಡೆ ದಸರಾ ಸಂಭ್ರಮ.. ಕೋಲಾರದಲ್ಲಿ ದಲಿತರ ಮೇಲೆ ಹಲ್ಲೆ ಮಾಡುವ ಮೂಲಕ ದೌರ್ಜನ್ಯ
ಮೂಲ ಸ್ಥಳ ಪಿಓಕೆಯಲ್ಲಿದ್ದು ಬದಲಿಯಾಗಿ ತ್ರೀತ್ವಾಲ್ ನಲ್ಲಿ ನೂತನ ಶ್ರೀ ಶಾರದ ಪೀಠ ನಿರ್ಮಾಣ ಹಂತದಲ್ಲಿದೆ. ಶಾರದೆಗೆ ಇಂದಿಗೂ ಕಾಶ್ಮೀರ ಪುರವಾಸಿನಿ ಅಂತಾನೇ ಕರೆಯಲಾಗುತ್ತಿದೆ. ಹಲವು ದಶಕಗಳ ನಂತ್ರ ಕಾಶ್ಮೀರದಲ್ಲಿ ಮತ್ತೆ ಶಾರದೆ ನೆಲೆಸಲಿದ್ದಾಳೆ.
ಇದನ್ನೂ ಓದಿ :-ವಿಜಯನಗರದಲ್ಲಿ ಬೈಕ್ ಗೆ ಕಾರು ಡಿಕ್ಕಿ – ಬೈಕ್ ಸವಾರ ಸಾವು