ಹಿಜಾಬ್ (Hijab) ವಿಚಾರ ನ್ಯಾಯಾಲಯದ ಮುಂದೆ ಇದೆ. ನಾನು ಅದರ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ಯಾತ್ರೆ ಮಾಡ್ತಾ ಇರೋದರಿಂದ ಬಿಜೆಪಿ ಯಾತ್ರೆ ಮಾಡುತ್ತಾರೆ ಎಂಬ ಸಿದ್ದು ಹೇಳಿಕೆಗೆ ಧಾರವಾಡ (Dharawad) ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin kumar kateel) ತಿರುಗೇಟು ಕೊಟ್ಟಿದ್ದಾರೆ. ನಾವು ಅಧಿಕಾರಕ್ಕೆ ಬಂದಿರೋದು ಯಾತ್ರೆಯ ಮುಖಾಂತರ.
ಸಿದ್ದರಾಮಯ್ಯ (Siddaramaiah) ಭಿಕ್ಷೆ ಬೇಡಿ, ಯಾರ್ಯಾರದೋ ಕಾಲ್ ಹಿಡಿದು ಸಿಎಂ ಆದವರು. ದೇವೇಗೌಡರ ಕಾಲಿಗೆ ಬಿದ್ದು ಅವರ ಹತ್ತಿರ ಬೆಳದವರು.ಇಂದಿರಾಗಾಂಧಿ ಅವರಿಗೆ ನಿಂದನೆ ಮಾಡ್ತಾ ಇದ್ರು .ಕೊನೆಗೆ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದವರು ಎಂದು ಕಿಡಿ ಕಾರಿದ್ರು. ಯಡಿಯೂರಪ್ಪ ಸೈಕಲ್ ಯಾತ್ರೆ ಮಾಡಿದ್ದಾರೆ. ಅವರಷ್ಟು ಯಾರಿಗೂ ಯಾತ್ರೆ ಮಾಡಲು ಆಗಲ್ಲ. ಕಾಂಗ್ರೆಸ್ ಯಾತ್ರೆ ಎಂಬ ಪದವನ್ನ ಕಲಿತಿದ್ದು ಬಿಜೆಪಿಯಿಂದ ಎಂದು ಹೇಳಿದ್ರು. ಸಿದ್ದರಾಮಯ್ಯ ಅಧಿಕಾರ ಕಳಕ್ಕೊಂಡು ಹುಚ್ಚರಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಸ್ಥಿರತೆ ಕಾಡುತ್ತಿದೆ, ಡಿಕೆಶಿ, ಖರ್ಗೆ ಯಾರನ್ನ ಸಿಎಂ ಮಾಡ್ತಾರೆ ಅನ್ನೋ ಭಯವಿದೆ. ಇಂದಿರಾ ಗಾಂಧಿ ಪ್ರಧಾನಿ ಆದಾಗ ವಾಜಪೇಯಿ ಗೌರವಯುತವಾಗಿ ನಡೆದುಕೊಂಡರು ಎಂದು ತಿಳಿಸಿದ್ರು. ಇದೇ ವೇಳೆ ನಮಗೆ ವಯಸ್ಸಾದಷ್ಟು ಮೋದಿ ಯಡಿಯೂರಪ್ಪ (Yediyurappa) ಅವರಿಗೆ ರಾಜಕೀಯ ಅನುಭವವಿದೆ ಎಂದು ಹೇಳಿದ್ರು. ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ಳಬೇಕು.ಇಲ್ಲದಿದ್ದರೆ ನಾವು ಅವರಿಗೆ ಉತ್ತರ ಕೊಡಬೇಕಾಗುತ್ತೆ. ನಮಗೆ ಸಿದ್ದು ಭಯ ಇಲ್ಲ, ಡಿಕೆಶಿ, ಪರಮೇಶ್ವರ್, ಖರ್ಗೆಗೆ ಬಿಜೆಪಿ ಅವರನ್ನ ಕಂಡರೆ ಭಯ ಇದೆ. ಅವರೆಲ್ಲರ ಭಯ ಸಿದ್ದರಾಮಯ್ಯ ಅವರಿಗೆ ಇದೆ ಅದಕ್ಕೆ ಹೀಗೆ ಮಾತಾಡ್ತಾರೆ ಎಂದು ತಿಳಿಸಿದ್ರು. ಇದನ್ನೂ ಓದಿ :- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿದ ಬಿಜೆಪಿ
ಮೀಸಲಾತಿ ವಿಚಾರದ ಬಗ್ಗೆ ಶಾಸಕ ಅರವಿಂದ ಬೆಲ್ಲದ್ (Aravind bellad) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅವರ ಅಭಿಪ್ರಾಯವನ್ನ ಹೇಳಿದ್ದಾರೆ ಅದರಲ್ಲೆನಿದೆ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :- ಚಿಕ್ಕಪೇಟೆ ಸ್ಲಂ ಜನರಿಗೆ ನಾನು ಮನೆ ಕಟ್ಟಿಸಿಕೊಡಲಿದ್ದೇನೆ –ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ – KGF ಬಾಬು