ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ರಸ್ತೆ ಗುಂಡಿಯಿಂದಾದ ಅಪಘಾತ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿಸುತ್ತಿದೆ. ಸದ್ಯ ಘಟನೆ ಬಳಿಕ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ BBMP ಮುಖ್ಯ ಆಯುಕ್ತ ತುಷಾರ್ ಪರಿಶೀಲನೆ ನಡೆಸುತ್ತಿದ್ದಾರೆ.
ರಸ್ತೆಗುಂಡಿ, ಚರಂಡಿ ಸಮಸ್ಯೆ, ಲೈಟಿಂಗ್ ಸಮಸ್ಯೆ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ. ನಿನ್ನೆ ಪಶ್ಚಿಮ ವಲಯದಲ್ಲಿ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದ್ದ ಆಯುಕ್ತ ತುಷಾರ್ ಅವರು ಇಂದು ದಕ್ಷಿಣ ವಲಯದಲ್ಲಿ ಮಿನರ್ವ ಸರ್ಕಲ್ ನಿಂದ ಪರಿಶೀಲನೆ ಆರಂಭಿಸಿದ್ದಾರೆ. ಇದನ್ನೂ ಓದಿ : – ಮಲೆನಾಡು ಸೇರಿ ಕರ್ನಾಟಕದ 5 ಜಿಲ್ಲೆಗಳಲ್ಲಿ ಮತ್ತೆ ಮಳೆ – ಹಳದಿ ಅಲರ್ಟ್ ಘೋಷಣೆ
ಆಯುಕ್ತ ತುಷಾರ್ ಗಿರಿನಾಥ್ ( tushar girinath ) ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕಾಲ್ನಡಿಗೆಯ ಮುಖಾಂತರ ಖುದ್ದು ಅವರೇ ಸಮಸ್ಯೆಗಳ ಪರಿವೀಕ್ಷಣೆ ಮಾಡಿದ್ದಾರೆ. ಅಧಿಕಾರಿಗಳ ಜೊತೆಗೆ ಸುಮಾರು 6 ಕಿ.ಮೀ ವರೆಗೂ ನಡೆದು ಜನರ ಬಳಿ ಮಾಹಿತಿ ಪಡೆಯುತ್ತಿದ್ದಾರೆ. ಮಿನರ್ವ ಸರ್ಕಲ್ ನಿಂದ ಕಾಲ್ನಡಿಗೆ ಆರಂಭವಾಗಿ ಲಾಲ್ ಬಾಗ್ ವೆಸ್ಟ್ ಗೇಟ್ ವರೆಗೂ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಗುಂಡಿ, ಕೇಬಲ್ ತೆರವು, ಲೈಟಿಂಗ್ ಸಮಸ್ಯೆ, ಪುಟ್ ಪಾತ್ ಸ್ವಚ್ಪತೆ , ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : – YSR ಪಕ್ಷಕ್ಕೆ ಎಚ್ಚರಿಕೆ ನೀಡಲು ವೇದಿಕೆ ಮೇಲೆ ಚಪ್ಪಲಿ ತೋರಿಸಿದ ಜನಸೇನಾ ನಾಯಕ ಪವನ್ ಕಲ್ಯಾಣ್..!