ವಿಷಯುಕ್ತ ಆಹಾರ ಸೇವಿಸಿ 33 ಕುರಿಗಳು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪೂರ ಬಳಿ ನಡೆದಿದೆ. ಲೋಕಾಪೂರದ ಕೇಶವ ಸಿಮೆಂಟಿನಿಂದ ಹೊರ ಬರುತ್ತಿರುವ ವಿಷ ಪದಾರ್ಥ ಸೇವಿಸಿ ಕುರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಚಂದ್ರು ಕಾಳೆ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. 111 ಕುರಿಗಳಲ್ಲಿ 33 ಕುರಿಗಳು ಸಾವನ್ನಪ್ಪಿ, ನಾಲ್ಕು ಕುರಿಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಹಾಗೂ ಲೋಕಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : – ಪೇಸಿಎಂ ಪ್ರಕರಣ- ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ಧದ FIR ವಜಾಗೊಳಿಸಿದ ಹೈಕೋರ್ಟ್