ಕೆ.ಜಿ.ಹಳ್ಳಿ (KG.Halli) ಪೊಲೀಸರಿಂದ ಪಿಎಫ್ ಐ (PFI) ಮುಖಂಡರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ ಐ ಮುಖಂಡರ ವಿಚಾರಣೆ ವೇಳೆ ಸ್ಪೋಟಕ ಸತ್ಯ ಬಯಲಾಗಿದೆ. ಪಿಎಫ್ ಐ ಮುಖಂಡರು ಭವಿಷ್ಯದಲ್ಲಿ ದೊಡ್ಡ ಪ್ಲಾನ್ ಮಾಡಿದ್ದರು. ಸೈನಿಕರ ರೀತಿ ಯುವಕರನ್ನು ಪಿಎಫ್ ಐ ಮುಖಂಡರು ಸಜ್ಜುಗೊಳಿಸುತ್ತಿದ್ದರು. ಹೆಲ್ತ್ ಇಂಡಿಯಾ ,ಫಿಟ್ ಇಂಡಿಯಾ ಎಂಬ ಧ್ಯೇಯದೊಂದಿಗೆ ಯುವಕ (Youths) ರನ್ನು ನೇಮಕ ಮಾಡ್ತಿದ್ದರು.
45 ಸಾವಿರ ಸದಸ್ಯರನ್ನು ಸೈನಿಕರ ರೀತಿ ತಯಾರಿ ಮಾಡ್ತಿದ್ದರು. ಇದಕ್ಕಾಗಿ ದಷ್ಟ ಪುಷ್ಟ ಯುವಕರನ್ನು ಹುಡುಕುತ್ತಿದ್ದರು. ಸಧೃಡ ಯುವಕರನ್ನು ಪಿಎಫ್ ಐ ಗೆ ತಯಾರಿ ಮಾಡುತ್ತಿದ್ದರು. ವಿದ್ವಂಸಕ ಕೃತ್ಯಕ್ಕೆ ಟ್ರೈನಿಂಗ್ ನೀಡಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು A10, A17 ಆರೋಪಿಗಳ ವಿಚಾರಣೆ ವೇಳೆ ಹೆಲ್ತ್ ಇಂಡಿಯಾ, ಫಿಟ್ ಇಂಡಿಯಾ ರಹಸ್ಯ ಬಯಲಾಗಿದೆ. ಮಂಗಳೂರು ವಿಟ್ಲ ಮಿಟಿಂಗ್ ಸೆಂಟರ್ ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಿಟಿಂಗ್ ನಡೆಸಿದ್ದ ಜಾಗದಲ್ಲಿ ಪೊಲೀಸರಿಂದ ಮಹಜರ್ ನಡೆದಿದೆ. ಪಿಎಫ್ ಐ ನ ನವಾಜ್ ಕಾವರ್,ಅಬ್ದುಲ್ ಅಜೀಜ್ ಅಬ್ದುಲ್ ಮೊಬೈಲ್ ನಲ್ಲಿ ನೇಮಕಾತಿ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇಬ್ಬರ ಮೊಬೈಲ್ ಪರಿಶೀಲನೆ ವೇಳೆ ಹೆಲ್ತ್ ಇಂಡಿಯಾ -ಫಿಟ್ ಇಂಡಿಯಾ ಬಗ್ಗೆ ಚರ್ಚೆ ನಡೆದಿದೆ. ವಾಟ್ಸಪ್ ,ಟಿಲಿಗ್ರಾಂ ನಲ್ಲಿ ಆರೋಪಿಗಳ ದುಷ್ಕೃತ್ಯದ ಬಗ್ಗೆ ಚರ್ಚೆ ನಡೆದಿದೆ. ಸಧೃಡ ಯುವಕರನ್ನು ಬಳಸಿಕೊಂಡು ಕೋಮು ಗಲಭೆ ಸೃಷ್ಠಿಸಲು ಪ್ಲಾನ್ ಮಾಡಿದ್ರು. 2047 ಕ್ಕೆ ಮುಸ್ಲಿಂ ರಾಷ್ಟ್ರ ಮಾಡಲು ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಿದ್ದರು.
ಇದನ್ನೂ ಓದಿ : – ಕಾಂಗ್ರೆಸ್ – ಬಿಜೆಪಿ ಯಾತ್ರೆಗಳ ಬಗ್ಗೆ ನಾನು ಮಾತಾಡಲ್ಲ – ನಿಖಿಲ್ ಕುಮಾರಸ್ವಾಮಿ