ಕೇಶವಕೃಪ ಕಂಟ್ರೋಲ್ ನಲ್ಲಿ ಈ ಸರ್ಕಾರ ನಡೆಯುತ್ತಿದೆ – ಪ್ರಿಯಾಂಕ್ ಖರ್ಗೆ ಲೇವಡಿ

ಬೊಮ್ಮಾಯಿ ಸಾಹೇಬರ ಕಂಟ್ರೋಲ್ ನಲ್ಲಿ ಈ ಸರ್ಕಾರ ಇಲ್ಲ. ಕೇಶವಕೃಪ ಕಂಟ್ರೋಲ್ ನಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ( priyaka kharge ) ವಾಗ್ದಾಳಿ ನಡೆಸಿದ್ದಾರೆ.

ಬೊಮ್ಮಾಯಿ ಸಾಹೇಬರ ಕಂಟ್ರೋಲ್ ನಲ್ಲಿ ಈ ಸರ್ಕಾರ ಇಲ್ಲ. ಕೇಶವಕೃಪ ಕಂಟ್ರೋಲ್ ನಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ( priyaka kharge ) ವಾಗ್ದಾಳಿ ನಡೆಸಿದ್ದಾರೆ.

ಅವರ ಕಂಟ್ರೋಲ್ ನಲ್ಲಿ ಇದ್ದಿದ್ದರೆ ಸ್ಪಂದಿಸುತ್ತಿದ್ದರು. ಕ್ಯಾಬಿನೆಟ್ ಸಹ ಸಿಎಂ ಬೊಮ್ಮಾಯಿ ಕಂಟ್ರೋಲ್ ನಲ್ಲಿ ಇಲ್ಲ. RSS ಕಂಟ್ರೋಲ್ ನಲ್ಲಿ ನಡೆಯುತ್ತಿದೆ. ಸುಧಾಕರ್ ಗೆ ಸ್ವಲ್ಪವೂ ಮಾನವೀಯತೆ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಬಿಮ್ಸ್ ಸಾವು ಪ್ರಕರಣ, ಕೋವಿಡ್ ಪ್ರಕರಣ ಎಲ್ಲ ನಡೆದರೂ ಸುಧಾಕರ್ ರಾಜೀನಾಮೆ ಕೊಡಬೇಕಿತ್ತು. ಇಂಥವರು ರಾಜೀನಾಮೆ ಕೊಡುತ್ತಾರೆ ಈಗ ಅಂತ ನಿರೀಕ್ಷೆ ಮಾಡಬಹುದಾ? ಮೂರು ವರ್ಷದಲ್ಲಿ ಏನು ನಿಮ್ಮ ಸಾಧನೆ ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ : –  ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಸಿದ್ಧವಾದ ಕೆಂಪೇಗೌಡ ಮಾದರಿ ಪೇಟ…!

ಸಸ್ಪೆಂಡ್ ಮಾಡಿದರೆ ಸಾಲದು ವೈದ್ಯರ ಲೈಸೆನ್ಸ್ ರದ್ದು ಮಾಡಬೇಕು
ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಶಿಶುಗಳ ಸಾವು ಕೇಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು. ಸರ್ಕಾರ ಮಾನವೀಯತೆ ಕಳೆದುಕೊಂಡಿದೆ. ಬಿಜೆಪಿ ನಾಯಕರಿಗೆ ದುಡ್ಡು ಗಳಿಸುವುದು ಮಾತ್ರ ಗೊತ್ತಿದೆ. PSI ಅಭ್ಯರ್ಥಿಗಳು ಸಚಿವರ ಬಳಿ ಹೋದರೆ DySP ಹೊಡೀತಾರೆ. ಆಸ್ಪತ್ರೆಯಲ್ಲಿ ದುಡ್ಡು ಕೊಡಿ ಅಂತಾ ಹಿಂಸೆ ಕೊಟ್ಟು ಹೊರ ಹಾಕುತ್ತಾರೆ. ತುಮಕೂರಿನಲ್ಲಿ ನಡೆದ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ. ಸಸ್ಪೆಂಡ್ ಮಾಡಿದರೆ ಸಾಲದು ವೈದ್ಯರ ಲೈಸೆನ್ಸ್ ರದ್ದು ಮಾಡಬೇಕು. ದುಡ್ಡು ಪಡೆದು ಪೋಸ್ಟಿಂಗ್ ಆಗುತ್ತಿರುವುದಕ್ಕೆ ಹೀಗೆ ಆಗುತ್ತಿದೆ. ಚಾಮರಾಜನಗರದಲ್ಲೂ ದಾಖಲೆ ತಿದ್ದಿ ಯಾರೂ ಸತ್ತಿಲ್ಲ ಅಂದರು. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗೆ ಈವರೆಗೆ 21 ಜನ ಸತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ನಿಮ್ಮ ಸರ್ಕಾರದಲ್ಲಿ ಸತ್ತಿಲ್ವಾ ಅಂತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : –  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- NIA ದಾಳಿ – ಮೂವರು ಪಿಎಫ್‌ಐ ಮುಖಂಡರ ಬಂಧನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!