ಹಿಂದೂ ಎಂಬ ಪದಕ್ಕೆ ಅಸಭ್ಯ ಅರ್ಥವಿದೆ ಎಂಬ ಸತೀಶ್ ಜಾರಕಿಹೊಳಿ ( sathish jarakiholi )ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ( araga jyanedra ) ಪ್ರತಿಕ್ರಿಯೆ ನೀಡಿದ್ದಾರೆ. ಇದು ಆಚ್ಚರಿ ಏನು ಇಲ್ಲ.
ಕಾಂಗ್ರೆಸ್ ( congress ) ನವರ ನಡುವಳಿಕೆಯೇ ಇದು. ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವ ಹಾಗೂ ಬಂದ ನಂತರವೂ ಮುಸ್ಲಿಂರಿಗೆ ದೇಶ ಒಡೆದು ಕೊಟ್ಟವರು ಇವರು. ಮುಸ್ಲಿಂರನ್ನು ತುಷ್ಟಿಕರಣ ಮಾಡಿ, ಹಿಂದು ಮುಸ್ಲಿಂ ಒಟ್ಟಿಗೆ ಬದುಕದ ರೀತಿಯಲ್ಲಿ ಮಾಡಿದ್ದಾರೆ. ಆದ್ದರಿಂದ ಸತೀಶ್ ಜಾರಕಿಹೊಳಿ ಮುಸ್ಲಿಂ ತುಷ್ಠಿಕರಣದ ಒಂದು ಭಾಗ. ಹಾಗಾಗಿ ಇದರಲ್ಲಿ ಅಚ್ಚರಿ ಏನು ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ..?
ಸುರ್ಜೇವಾಲ ಖಂಡನೆ ವಿಚಾರ
ತೊಟ್ಟಿಲು ತೂಗೊದು ಅವರೇ, ಮಗುವನ್ನ ಚೂಟೋದು ಅವರೇ, ಮಸೀದಿಗೆ ಹೋಗಿ ಕರ್ಚಿಫ್ ಹಾಕಿ ಕುಳಿತುಕೊಳ್ಳುವವರು..ಈಗ ದೇವಸ್ಥಾನ ಓಡಾಡುತ್ತಿದ್ದಾರೆ. ಗಂಗಾ ( ganga ) ನದಿಗೆ ಹೋಗಿ ಸ್ನಾನ ಮಾಡ್ತಾರೆ. ಹಿಂದೂಗಳನ್ನು ಓಲೆಸಬೇಕು, ಮುಸ್ಲಿಂ ಅವರನ್ನು ಓಲೆಸಬೇಕು ಎಂದು ಈ ರೀತಿ ಹೇಳ್ತಾರೆ ಎಂದು ಹೇಳಿದ್ರು.
ಇದನ್ನೂ ಓದಿ : – ಹಿಂದೂ ಪದದ ಅರ್ಥ ಅಸಭ್ಯ – ತಮ್ಮ ಹೇಳಿಕೆಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ಸತೀಶ್ ಜಾರಕಿಹೊಳಿ