ಚುನಾವಣಾ ಪ್ರಕ್ರಿಯೆಯನ್ನ ಭ್ರಷ್ಟಾಚಾರಗೊಳಿಸುವ ಹುನ್ನಾರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ( D.K SHIVKUMAR ) ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ನೆಪಕ್ಕೆ ಮಾತ್ರ ವಶಕ್ಕೆ ಪಡೆದಿದ್ದಾರೆ. ಯಾರೋ ಒಬ್ಬ ಇಬ್ಬರ ಮೇಲೆ ಮಾಡಿದ್ರೆ ಆಗಲ್ಲ. ಎಲ್ಲರ ಮೇಲೆ FIR ಹಾಕಬೇಕು.
ಐಡಿ ಕಾರ್ಡ್ ( ID CARD ) ಯಾರು ಪಡೆದಿದ್ದಾರೆ ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಚೀಫ್ ಜಸ್ಟೀಸ್ ಅವರು ಸುಮೊಟೋ ಅಡಿ ಕೇಸ್ ದಾಖಲಿಸಬೇಕು. ತುಷಾರ್ ಗಿರಿನಾಥ್ ಯಾರೇ ಇನ್ವಾಲ್ವ್ ಆಗಿರಲಿ. ಯಾರು ಕಾರ್ಡ್ ಇಷ್ಟೂ ಮಾಡಿದ್ದಾರೆ ಅವರ ಮೇಲೆ ಕೇಸ್ ಹಾಕಬೇಕು. ಕುಮಾರಸ್ವಾಮಿ ಬೇರೆ ಪಾರ್ಟಿಯವರು. ಇದನ್ನೂ ಓದಿ : – ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿದ ಆರೋಪ – ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್
ನಾನು ಒಬ್ಬ ಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ. ಇದು ಕ್ರಿಮಿನಲ್ ಅಫೆನ್ಸ್ . ಇವರು ಮತದಾನದ ಹಕ್ಕುನ್ನ ಕಿತ್ತುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇವರ ಫೋನ್ ರೆಕಾರ್ಡ್ ತೆಗೆಯಿರಿ. ಯಾರ್ಯಾರು ಇದ್ದಾರೆ ಅವರು ಹೊರಬರ್ತಾರೆ. ಎಷ್ಟು ದಿನ ಎಷ್ಟು ಗಂಟೆ ಫೋನ್ ಸಂಪರ್ಕದಲ್ಲಿದ್ದಾರೆ ಎಂದು ತಿಳಿಯಬಹುದು ಎಂದು ಹೇಳಿದ್ರು.
ಇದನ್ನೂ ಓದಿ : – ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಗೆ ಮಸಾಜ್– ವೀಡಿಯೋ ಬಿಡುಗಡೆ