ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ – ಸಂಜೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು ನಗರದ ಬಸವನಗುಡಿ ( BASAVANAGUDI ) ಯಲ್ಲಿ ಇಂದಿನಿಂದ 3 ದಿನ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದ್ದುಇಂದು ಸಂಜೆ 6.30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ( BASAVARAJ BOMMAI ) ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು ನಗರದ ಬಸವನಗುಡಿ ( BASAVANAGUDI ) ಯಲ್ಲಿ ಇಂದಿನಿಂದ 3 ದಿನ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದ್ದುಇಂದು ಸಂಜೆ 6.30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ( BASAVARAJ BOMMAI ) ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ.

ಇಂದು ಬೆಳ್ಳಗ್ಗೆ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತೆ. ಬಳಿಕ ಬೆಳ್ಳಗ್ಗೆ 7:30 ಕ್ಕೆ ದೊಡ್ಡಗಣೇಶನಿಗೆ 508 ಕೆಜೆ ಕಡಲೆಕಾಯಿಂದ ಅಭಿಶೇಕ ಮಾಡಿ ನಂತರ ಬರುವಂತಹ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ.

ಈಗಾಗಲೇ ದೇವಸ್ಥಾನದ ಸುತ್ತಲೂ ಜಾತ್ರೆಯ ವಾತಾವರಣ ಮನೆಮಾಡಿದೆ. ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಹಾನಿಯಾಗದಂತೆ ಪೋಲಿಸರ ನಿಯೋಜನೆ ಮಾಡಲಾಗಿದೆ. 400 ಜನ ಪೋಲಿಸರು, 4 ಕೆಎಸ್ಆರ್ಪಿ ತುಕಡಿ ಹಾಗೂ 25 ರಿಂದ 30 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇದನ್ನೂ ಓದಿ :– ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಪರಿಹಾರ ನೀಡ್ತಾರಾ ಆರ್ ಅಶೋಕ್…?

ಈ ಬಾರಿ ಒಟ್ಟು 500ಕ್ಕೂ ಹೆಚ್ಚು ಕಡಲೆಕಾಯಿ ( kadle kai ) ಅಂಗಡಿಗಳನ್ನ ರೈತರು ಹಾಕಿದ್ದಾರೆ. ಕೋಲಾರ, ರಾಮನಗರ, ಚಿತ್ರದುರ್ಗ, ಆಂಧ್ರ, ತಮಿಳುನಾಡು ಸೇರಿದಂತೆ ಹಲವೆಡೆಯಿಂದ ರೈತರು ಬಂದು ಅಂಗಡಿಗಳನ್ನು ಹಾಕಿದ್ದಾರೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಪರೀಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಅಂಗಡಿಗೂ ಪಾಲಿಕೆಯಿಂದ ಪರಿಸರ ಸ್ನೇಹಿ ಬ್ಯಾಗ್ ವಿತರಣೆ ಮಾಡಲಾಗಿದ್ದು ಸಾರ್ವಜನಿಕರೇ ಬ್ಯಾಗ್ ತರುವಂತೆ ಮನವಿ ಮಾಡಲಾಗಿದೆ. ಹುರಿದಿರುವ ಕಡಲೆಕಾಯಿ ಸೇರಿಗೆ 30ರೂ, ಲೀಟರ್ ಗೆ 60ರೂ ನಿಗದಿ ಮಾಡಿದ್ದು ಹಸಿ ಕಡ್ಲೆಕಾಯಿ ಸೇರಿಗೆ 30 ರೂ, ಲೀಟರ್ ಗೆ 50 ರೂ ನಿಗದಿಯಾಗಿದೆ.

ಇದನ್ನೂ ಓದಿ :– ಮಂಗಳೂರಿನಲ್ಲಿ ಬಸವರಾಜ್ ಬೊಮ್ಮಾಯಿ – ಕಟೀಲ್ ಭೇಟಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!