ನಾವು ಚುನಾವಣಾಧಿಕಾರಿ (Election officer) ಗೆ ದೂರು ಕೊಟ್ಟಿದ್ದೀವಿ. ದೂರಿನಲ್ಲಿ ಸಿದ್ದರಾಮಯ್ಯ (Siddaramaiah) ಹೆಸರನ್ನೂ ಸೇರಿಸಿದ್ದೀವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಹೇಳಿದ್ದಾರೆ . ಬೆಂಗಳೂರಿನಲ್ಲಿ ಮಾತನಾಡಿದ ಅವರು ಚಿಲುಮೆ (Chilume organization) ಗೆ ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್.ಎಲೆಕ್ಷನ್ ಕಮೀಷನ್ ಮಾಡುವ ಕೆಲಸದ ಹೊಣೆಯನ್ನು ಕಾಂಗ್ರೆಸ್ ನವರು ಚಿಲುಮೆಗೆ ಕೊಟ್ಟಿದ್ರು.
ಕಾಂಗ್ರೆಸ್ (Congress) ನಾಯಕರೂ ಚಿಲುಮೆಯನ್ನು ಏಜೆನ್ಸಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನವರು ನಮ್ಮ ಮೇಲೆ ರಾಜಕೀಯ ಪ್ರೇರಿತ ಆರೋಪ ಮಾಡ್ತಿದಾರೆ ಎಂದು ಆರೋಪಿಸಿದ್ರು. ಎಲ್ಲ ಸತ್ಯ ಹೊರಗೆ ಬರಬೇಕು ಅಂತ 2013 ರಿಂದಲೂ ತನಿಖೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಏನೋ ಒಂದು ದೊಡ್ಡ ಹಗರಣ ಸಿಕ್ತು ಅಂತ ಕಾಂಗ್ರೆಸ್ ನವರು ಅನ್ಕೊಂಡಿದ್ದಾರೆ. ಈ ಪ್ರಕರಣ ಅವರಿಗೇ ತಿರುಗುಬಾಣ ಆಗುತ್ತೆ ಎಂದು ಹೇಳಿದರು. ಇದೇ ವೇಳೆ 27 ಲಕ್ಷ ಮತದಾರರನ್ನು ರದ್ದು ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಇದನ್ನೂ ಓದಿ :– ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ – ಸಂಜೆ ಸಿಎಂ ಬೊಮ್ಮಾಯಿ ಚಾಲನೆ
ಇದು ನಿರಾಧಾರ ಆರೋಪ. ಕಾಂಗ್ರೆಸ್ ಕ್ಷೇತ್ರಗಳಿಗಿಂತ ಬಿಜೆಪಿ (Bjp) ಕ್ಷೇತ್ರಗಳಲ್ಲೇ ಹೆಚ್ಚು ಮತದಾರರ ಹೆಸರುಗಳು ರದ್ದಾಗಿವೆ. ರದ್ದು ಮಾಡಿರೋದು ಚುನಾವಣಾ ಆಯೋಗ. ಕಾಂಗ್ರೆಸ್ ನವರು ಕೇಂದ್ರ ಚುನಾವಣಾ ಆಯೋಗಕ್ಕಾದರೂ ದೂರು ಕೊಡಲಿ. ಎಲ್ಲಿ ಬೇಕಾದರೂ ದೂರು ಕೊಡಲಿ. ನ್ಯಾಯ ನ್ಯಾಯನೇ, ಸತ್ಯ ಸತ್ಯನೇ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ :– ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟರ್ ಖಾತೆ