ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ( BASAVARAJ BOMMAI ) ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಹಿಳಾ ಆಯೋಗಕ್ಕೆ ಬೇಕಾದ ಅವಶ್ಯಕತೆಯನ್ನು ನೀಡುವುದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ. ನಿರ್ಭಯ ಅಡಿಯಲ್ಲಿ ೭ ಸಾವಿರ ಆರ್ಟಿ ಪಿಷಿಯಲ್ ಕ್ಯಾಮಾರಾ ಹಾಕುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ೨ ಸಂಘಗಳನ್ನು ಆರಂಭ ಮಾಡುತ್ತಿದ್ದೇವೆ. ಆ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ ಸಿಗುತ್ತಿದೆ ಎಂದು ಹೇಳಿದ್ರು. ಇದನ್ನೂ ಓದಿ : – ಸಾದಲಿಯ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ
ಮಹರಾಷ್ಟ್ರ ( MAHARASTRA ) ದಿಂದ ಗಡಿಕ್ಯಾತೆ, ಮಾತುಕತೆಗೆ ಇಂಗಿತ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಉದ್ದೇಶ ಸ್ಪಷ್ಟ. ನಾವು ಕಾನೂನು ಹೋರಾಟ ಮುಂದುವರೆಸ್ತೇವೆ. ಅವರು ಮಾತುಕತೆಗೆ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸ್ತೇವೆ. ಮುಂದಿನ ವಾರ ಸರ್ವಪಕ್ಷ ಸಭೆ ಕರೆದಿದ್ದೇವೆ. ರಾಜ್ಯಗಳ ನಡುವೆ ಶಾಂತಿ ಸೌಹಾರ್ದ ಸಂಬಂಧ ಇರಬೇಕು. ಗಡಿ ಕ್ಯಾತೆ ಮಾಡುವುದನ್ನು ಮಹಾರಾಷ್ಟ್ರ ಸರ್ಕಾರ ಮೊದಲು ನಿಲ್ಲಿಸಲಿ. ನಾವು ಕಾನೂನಿಗೆ ತಲೆ ಬಾಗಬೇಕಾಗುತ್ತದೆ. 2004 ರಲ್ಲಿ ಮಹಾರಾಷ್ಟ್ರವೇ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದು, ನಾವು ಕೂಡಾ ಕಾನೂನು ಸಮರ ಮುಂದುವರೆಸಿದ್ದೇವೆ. ಈ ಕಾನೂನು ಸಮರದಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಪೊಲೀಸ್ ಠಾಣೆಯಲ್ಲಿದ್ದ 500 ಕೆಜಿ ಮಾದಕವಸ್ತು ತಿಂದ ಇಲಿಗಳು..!