ಅತ್ತ ಡಿ.ಕೆ ಶಿವಕುಮಾರ್ ( D. K SHIVKUMAR ) ತಮ್ಮ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸಿಎಂ ಆಗುವ ಆಸೆ ಬಿಚ್ಚಿಟ್ಟಿರೆ, ಇತ್ತ ಹೆಬ್ಬಾಳ್ ಕ್ಷೇತ್ರದ ನಾಗೇನಹಳ್ಳಿಯಲ್ಲಿ ನಡೆದ ಕನಕ ಜಯಂತಿ ಆಚರಣೆಯಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಘೋಷಣೆ ಕೇಳಿಬಂದಿದೆ.
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದು ಬೇರೆ ಯಾರು ಅಲ್ಲ ಅವರ ಆಪ್ತ ಶಾಸಕ ಬೈರತಿ ಸುರೇಶ್. ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಬೈರತಿ ಸುರೇಶ್ ಘೋಷಣೆ ಕೂಗಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ಸಂಚಲನಕ್ಕೆ ಕಾರಣವಾಗಿದೆ. ಈ ಮೂಲಕ ಕಾಂಗ್ರೆಸ್ ( CONGRESS ) ನಲ್ಲಿ ಮತ್ತೆ ಮತ್ತೆ ಸಿಎಂ ಕುರ್ಚಿ ಜಟಾಪಟಿ ಶುರುವಾದಂತೆ ಕಾಣುತ್ತಿದೆ.
ಇದನ್ನೂ ಓದಿ : – ದೈವಾರಾಧನೆ ಕುರಿತು ಸಿನಿಮಾ ಮಾಡಿದರೆ ವಿರೋಧ – ದೈವಾರಾಧಕರು