ನಾನು ಇಲ್ಲದೆ ಹೋಗಿದ್ರೆ ಕುರುಬ (Kuruba) ಸಂಘ ಉಳಿತಾ ಇರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಸತಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಇಲ್ಲದೆ ಹೋಗಿದ್ರೆ ಕುರುಬ ಸಂಘ ಉಳಿತಾ ಇರಲಿಲ್ಲ.
ಯಾರೋ ಮಾರಿಕೊಂಡು ತಿಂದು ಬಿಡ್ತಾ ಇದ್ರು.ನನಗೆ ಕೊಲೆ ಬೆದರಿಕೆ ಕೂಡ ಹಾಕಿದ್ರು ಆದ್ರು ನಾನು ಬಿಡಲಿಲ್ಲ .ಕನಕ ಗುರು ಪೀಠ ಮಾಡಿದ್ದು ನಾನು. ಬೇರೆಯವರು ಹೇಳ್ತಾರೆ ನಾವು ಮಾಡಿದ್ದು ಅಂತ.ಈಶ್ವರಪ್ಪ ಮೊದಲ ಸಭೆಗೆ ಬಂದ, ಪೀಠ ಮಾಡಲು ದುಡ್ಡು ಕೊಡಬೇಕು ಅಂದ್ರು ,ಎರಡನೇ ಸಭೆಗೆ ಬರಲೇ ಇಲ್ಲ ಆ ಗಿರಾಕಿ.ಆದ್ರೆ ಅವ ನಮ್ಮವ ಅಂತ ಜೈಕಾರ ಹಾಕ್ತಿರೀ ಎಂದು ಕೆ ಎಸ್ ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಇದನ್ನೂ ಓದಿ : – ಕನಕ ಜಯಂತಿಯಲ್ಲಿ ಕೇಳಿ ಬಂದ ಸಿದ್ದರಾಮಯ್ಯ ಸಿಎಂ ಕೂಗು..!