ಸಿದ್ರಾಮುಲ್ಲಾ ಖಾನ್ ಹೇಳಿಕೆ ಖಂಡಿಸಿ ಸಿ.ಟಿ.ರವಿ (CT.Ravi) ಮನೆಗೆ ಮುತ್ತಿಗೆ ವಿಚಾರಕ್ಕೆ ಚಿಕ್ಕಮಗಳೂರ (Chikkamagaluru) ಲ್ಲಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಭಾವನೆಯಿಂದ ಬಂದರೆ ಅತಿಥಿಗಳು ಅಂತ ಭಾವಿಸ್ತೇವೆ. ಅತಿಥಿಗಳನ್ನ ದೇವರು ಅಂತ ಭಾವಿಸಿ, ಸತ್ಕಾರ ಮಾಡ್ತೇವೆ . ದುರ್ಭಾವನೆಯಿಂದ ಬಂದರೆ ಆ ಭಾವನೆಯಿಂದಲೇ ಪ್ರತಿಕ್ರಿಯಿಸುತ್ತೇವೆ. ಸಿದ್ದರಾಮಯ್ಯನಿಗೆ ಈ ಹಿಂದೆ ಈಶ್ವರಪ್ಪ (Eshswarappa) , ಪ್ರತಾಪ್ ಸಿಂಹ, ಕೊಡಗು-ಮೈಸೂರಿನ ಜನ ಕೊಟ್ಟ ಬಿರುದು.
ಅದೇನೂ ಅಸಂಸದೀಯ ಪದವಲ್ಲ, ಬೈಗುಳವೂ ಅಲ್ಲ. ಅವರಿಗೆ ಪ್ರಿಯವಾಗಿರುವುದು ಏನೂ? ಟಿಪ್ಪು, ಟೋಪಿ ಪ್ರಿಯವಾಗಿರುವುದಲ್ಲವಾ? ಹತ್ರವಾಗಿರುವುದನ್ನೇ ಹೇಳಿದ್ದೇನೆ. ದೂರವಾಗಿರುವ ಸಂಗತಿಯಲ್ಲ, ದುಃಖ ಪಡುವ ಸಂಗತಿಯೂ ಅಲ್ಲ. ಅವರಿಗೆ ಆನಂದ ಕೊಡುವ ಸಂಗತಿ. ಸಿದ್ದರಾಮಯ್ಯ (Siddaramaiah) ನಿಗೆ ಆಗದಿರುವುದು ಯಾವುದು. ಕೇಸರಿ ಪೇಟ ಆಗದಿರುವುದು, ಕುಂಕುಮ ಆಗದಿರುವುದು, ಕೇಸರಿ ಪೇಟ ಅಂತ ಹೇಳಿದ್ರೆ ಬೇಜಾರು ಆಗ್ತಿತ್ತೋ ಏನೋ ಎಂದು ಸಿದ್ದು ವಿರುದ್ದ ಲೇವಡಿ ಮಾಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ಬಿರುದು ಕೊಟ್ಟಿರುವುದನ್ನು ನೋಡಬೇಕು. ಟಿಪ್ಪು ಜಯಂತಿಗೆ ಜನ ಕೊಟ್ಟಿರುವ ಭಾವನೆ ಎಂದು ಭಾವಿಸುತ್ತಾರೆ ಅಂತ ಅಂದುಕೊಂಡಿದ್ದೇನೆ ಎಂದು ಸಿ. ಟಿ.ರವಿ ತಿಳಿಸಿದ್ದಾರೆ.
ಇದನ್ನೂ ಓದಿ : – ಒಕ್ಕಲಿಗರ ಮೀಸಲಾತಿ ವಿಚಾರ – ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ – ಸಿಎಂ ಬೊಮ್ಮಾಯಿ