ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತ – MLC ನಸೀರ್ ಅಹಮದ್

ಕೋಲಾರ (Kolar) ದಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಖಚಿತ ಎಂದು ಕೋಲಾರದಲ್ಲಿ ಕಾಂಗ್ರೆಸ್ MLC ನಸೀರ್ ಅಹಮದ್ (Naseer Ahmed) ಹೇಳಿದ್ದಾರೆ. ಕೋಲಾರ ಕಾಂಗ್ರೆಸ್ ನಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಸಿದ್ದರಾಮಯ್ಯ ಖಚಿತ ಹಿನ್ನಲೆಯೇ ಪಂಚಾಯ್ತಿ ಮಟ್ಟದ ಸಭೆ ನಡೆಸ್ತಿದ್ದೀವಿ. ಕ್ಷೇತ್ರ ಆಯ್ಕೆ ಹೈ ಕಮಾಂಡ್ ನಿರ್ಧಾರಕ್ಕೆ ಸಿದ್ದರಾಮಯ್ಯ ಬಿಟ್ಟಿರುವುದು ನಿಜ.

ಕೋಲಾರ (Kolar) ದಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಖಚಿತ ಎಂದು ಕೋಲಾರದಲ್ಲಿ ಕಾಂಗ್ರೆಸ್ MLC ನಸೀರ್ ಅಹಮದ್ (Naseer Ahmed) ಹೇಳಿದ್ದಾರೆ. ಕೋಲಾರ ಕಾಂಗ್ರೆಸ್ ನಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಸಿದ್ದರಾಮಯ್ಯ ಖಚಿತ ಹಿನ್ನಲೆಯೇ ಪಂಚಾಯ್ತಿ ಮಟ್ಟದ ಸಭೆ ನಡೆಸ್ತಿದ್ದೀವಿ. ಕ್ಷೇತ್ರ ಆಯ್ಕೆ ಹೈ ಕಮಾಂಡ್ ನಿರ್ಧಾರಕ್ಕೆ ಸಿದ್ದರಾಮಯ್ಯ ಬಿಟ್ಟಿರುವುದು ನಿಜ.

ಆದರೆ ನಮಗೆ ಸ್ಪರ್ಧೆ ಮಾಡುವ ಭವರಸೆ ನೀಡಿದ್ದಾರೆ. ನಾವು ಕರೆದಾಗ ಕೋಲಾರಕ್ಕೆ ಬರಲು ಸಿದ್ದರಾಮಯ್ಯ ಸಿದ್ದರಿದ್ದಾರೆ. ಬೂತ್ ಮಟ್ಟದಲ್ಲಿ ಇನ್ನೂ ಕೆಲ ಕೆಲಸಗಳು ಆಗಬೇಕಿದೆ. ಸಿದ್ದರಾಮಯ್ಯ ಮುಂದಿನ ಪ್ರವಾಸವನ್ನ ನಾವೆಲ್ಲ ನಿಗದಿ ನಾಡ್ತೀವಿ ಎಂದು ಹೇಳಿದ್ರು.
ನಂತರ ಮಾತನಾಡಿದ ಕೋಲಾರ ಕ್ಷೇತ್ರದ ಜೆಡಿಎಸ್ ನ ಬಂಡಾಯ ಶಾಸಕ ಶ್ರೀನಿವಾಸಗೌಡ (Srinivas gowda) , ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಖಚಿತ. ಆ ಉದ್ದೇಶದಿಂದಲೇ ಇಂದು ಸಭೆ ಕರೆಯಲಾಗಿದೆ ನಾವು ಸಿದ್ದರಾಮಯ್ಯ ಗೆಲುವಿಗೆ ಶ್ರಮವಹಿಸಿತ್ತೇವೆ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡುತ್ತೇನೆ. ಇದನ್ನೂ ಓದಿ : –  ದೇವನಹಳ್ಳಿಯಲ್ಲಿ ಶಾಲಾ ಮಕ್ಕಳ ಜೊತೆ ಊಟ ಮಾಡಿದ ಹೆಚ್.ಡಿ ಕುಮಾರಸ್ವಾಮಿ

ಕೋಲಾರ ಕ್ಷೇತ್ರದಿಂದ ಸ್ಪರ್ದಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಮೊನ್ನೆ ಕೋಲಾರ ಪ್ರವಾಸ ಮಾಡಿದ್ದಾರೆ. ಸಿದ್ದರಾಮಯ್ಯ ಗೆಲ್ಲಿಸೋದೆ ನನ್ನ ರಾಜಕೀಯ ಮುಂದಿನ ನೆಲೆ. ಕೋಲಾರ ತಾಲೂಕಿನ 23 ಗ್ರಾ.ಪಂ ಪ್ರವಾಸ ಮಾಡಿ, ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇನೆ. ಕೆ.ಹೆಚ್ ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಕಾರಣಾಂತರಗಳಿಂದ ಸೋತಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಲ್ಲಿ ನಾವೆಲ್ಲರೂ ಒಗ್ಗಟಾಗಿದ್ದೇವೆ, ಯಾವುದೇ ಬಣ ಇಲ್ಲ. ಸಿದ್ದರಾಮಯ್ಯ – ಕೆ.ಎಚ್ ಮುನಿಯಪ್ಪ ಇಬ್ಬರು ಭೇಟಿಯಾಗಿ ಚರ್ಚೆ ಮಾಡಿದ್ದಾರೆ ಎಂದು ಹೇಳಿದ್ರು.

ಇದನ್ನೂ ಓದಿ : ಸಿದ್ದರಾಮಯ್ಯ ಇನ್ನೂ ತನ್ನ ಕ್ಷೇತ್ರ ಯಾವುದು ಎಂದು ಹೇಳಿಲ್ಲ – ಎಂಟಿಬಿ ನಾಗರಾಜ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!